Monday, October 24, 2011

ಕುಡಿದು ಬರೆದಾಗ ( Drink ಅಂಡ್ write )


ಕುಡಿದು ಬರೆದಾಗ ( Drink ಅಂಡ್  write )   ,

ಈ ಶೀರ್ಷಿಕೆ ಎಷ್ಟು ಚೆನ್ನಾಗಿದೆ ಆಲ್ವಾ ? , ಸಾಮಾನ್ಯವಾಗಿ ಕುಡಿದವರು ( i mean alcohol ) ಪಕ್ಕದಲ್ಲಿರೋ  ಸ್ನೇಹಿತನಿಗೋ  ಇಲ್ಲ  ತನ್ನ ಪ್ರೆಯಸಿಗೋ , ತನ್ನ ಪಾನಕ್ಕೆ sponsor ಗೋ ಅಥವಾ ತಮ್ಮ ಹೆಂಡತಿಗೋ ತಮ್ಮ ಅನುಭವಗಳನ್ನು , ಅವಸರದಿಂದ , ಅವಶ್ಯವಿಲ್ಲದೆ  , ಅಳುಕಿಲ್ಲದೆ  , ಅಂಜಿಕೆ ಇಲ್ಲದೆ  , ಹದ್ದಿಲ್ಲದೆ , ತಮ್ಮ್ಕ ಮನಸ್ಸಿನ ಬಯಕೆಗಳನ್ನು , ಘಟನೆಗಳನ್ನೂ ,ಅನುಭವಗಳನ್ನೂ ಮಧ್ಯಪಾನದ ಅಮಲಿನಿಂದ ಹೊರಬರುವವರೆಗೂ ಹೇಳುತ್ತಾರೆ ಮತ್ತು ಕೆಲವರು ಗೊಣಗಿ ಕೊಳ್ಳುತ್ತಾರೆ .ಈ ಗೊಣಗಿಕೊಳ್ಳುವವರು ಸ್ನೇಹಿತರು , ಪ್ರೇಯಸಿಯು ಅಟ್ ಲೀಸ್ಟ್ ಕೊರೆಸಿಕೊಳ್ಳುವ ಯಾವ ಪ್ರಜೆಯು ಸಿಗದೇ ಹೋದಾಗ ಇವರು ಉದ್ಭವಿಸುತ್ತಾರೆ , ಇವರ ಬಗ್ಗೆ ಈಗ ಮಾತು ಬೇಡ , ಯಾಕೆಂದರೆ ಅದು ಅವರು ಪಡಕೊಂಡದ್ದು .

ಕುಡಿದವರು ಲೀಲಾಜಾಲವಾಗಿ ತಮ್ಮ ಮನಸ್ಸಿಗೆ ತೋಚಿದ್ದು ಹೇಳುತ್ತಿರುತ್ತಾರೆ , ಅವುಗಳಲ್ಲಿ ಒಂದಷ್ಟು ನಿಜ , ಒಂದಷ್ಟು ಕೇಳುಗರನ್ನು ಮೆಚ್ಚಿಸಲು ಹೇಳುವ ವರ್ಣನಾತೀತ ಮಾತುಗಳು ಅಷ್ಟೇ . ಆದರೆ ಆ ನಿಜಗಳು ಇವೆ ಆಲ್ವಾ , ಅವು ಮಾತ್ರ ಸಾಮಾನ್ಯವಾಗಿ ಇರುವುದಿಲ್ಲ ,ತಲೆಯ ಮೇಲೆ ಹೊಡೆದಂಗೆ  ಇರ್ತಾವೆ . ಬಹುಷಃ ನಾ ಈಗ ಹೇಳಿದ ಗಾದೆ ಮಾತು ಕೇಳಿರಬಹುದು, ಅದರ ಅನುಭವ ಬೇಕಾದರೆ ಕುಡುಕರ ಸಂಗಡ ಕೂರಬಹುದು .

ಕುಡಿದವರಿಗೆ ಒಂದು ರೀತಿಯ ಮೊಂಡು ಧೈರ್ಯ ಅಥವಾ ನಾವು ಕುಡಿದವರು so ,ನಾವು ಮನಸೆಚ್ಚ್ಹ ಮಾತನಾಡಬಹುದು ,ಯಾರು ಏನು ಕೇಳಿಯಾರು ಎಂಬ ಧೈರ್ಯ ದ ಮೇಲೆ ಈ ರೀತಿಯ ವರ್ತನೆ ಎಂದು ಎಲ್ಲರು ತಿಳಿದಿದ್ದಾರೆ. ಆದರೆ ನಿಜವಾಗಿ ಕುಡಿದವನು, ಅವ್ನ ಮೇಲೆ ನಿಯಂತ್ರಣ ತಪ್ಪಿರುತ್ತಾನೆ , ಆ ನಿಯಂತ್ರಣ ತಪ್ಪಿದಾಗ ನಾವು ಮನುಷ್ಯನ ನಿಜವಾದ ಮುಗ್ದ ಮನಸ್ಸಿನ ಸುಪ್ತ ಚಿತ್ರಣವನ್ನು ಕಾಣಬಹುದು .  ಆ ಚಿತ್ರಣ , ಕೇವಲ ಕೆಲವರಲ್ಲಿ ಮಾತ್ರ ಕಾಣಬಹುದು , ಈ ಯಾಂತ್ರಿಕ ಜಗತ್ತಿನಲ್ಲಿ , ಭಾವನೆಗಳ ಸುಳಿಯಲ್ಲಿ , ಜೀವನದ ಜಂಜಾಟದಲ್ಲಿ , ಈ ಚಿತ್ರಣ ಬಹು ಅವಶ್ಯ  ಅಲ್ವೇ ?

ಸರಿ , ಇಷ್ಟೆಲ್ಲಾ  ಕೊರಿತಿದ್ದಿಯ ಅಂದ್ರೆ , ನೀ ಬಹುಷಃ ಕುಡಿದಿರಲೇ ಬೇಕು ಅಂತ ನನ್ನ ಪ್ರಿಯ ಮಿತ್ರರು ಯೋಚಿಸಿರುತ್ತಿರಾ ಆಲ್ವಾ ? , so my answer is yessssssss .

ಎಲ್ಲೋ ದೂರದ ಊರಲ್ಲಿ , ಯಾರು ಜೊತೆ ಇಲ್ಲದೆ , ದಿನವು ಯಾಂತ್ರಿಕತೆಯ  ವೈಭವಕ್ಕೆ ಬೇಸತ್ತು , ಒಮ್ಮೆ ಒಬ್ಬನೇ ಕುಳಿತು ಪಾನಮತ್ತ ನಾದಾಗ , ಅದರ ವ್ಯಥೆಯೇ ಈ ನನ್ನ ಇವತ್ತಿನ ಅಂಕಣ . 
ಸರಿಯಾಗಿ ಕಂಠ ಪೂರ್ತಿ ಕುಡಿದೆ , ನನ್ನ ದೇಹ ತನ್ನ ಧಾರ್ಧ್ಯ ವನ್ನು ತಪ್ಪುವ ಸ್ಥಿತಿಗೆ ತಲುಪಿತು , ನನ್ನ ಡಾಕ್ಟರ ಸ್ನೇಹಿತ ಹೇಳಿದ್ದ " ಮಗನೆ ಕುಡಿದಾಗ ಚೆನ್ನಾಗಿ ತಿನ್ನು ಅಂಥ" , so , ಸರಿಯಾಗಿ ಕಂಠ ಪೂರ್ತಿ ತಿಂದೆ , ಬಿಲ್ ಕೊಟ್ಟು , ಹೇಗೋ ದಾರಿ ಹಿಡಿದು ಹೋಟೆಲ್ ತಲುಪಿದ್ದೇನೆ .

 ತಲುಪುವ ದಾರಿಯಲ್ಲಿ ನನ್ನ ಮನಸ್ಸಿನಲ್ಲಿ ನೂರಾರು ವಿಕಾರಗಳು , ಆ ವಿಕಾರಗಳನ್ನೆಲ್ಲ ಇಲ್ಲಿ ಬರೆದರೆ ನನ್ನ ಮಾರಣ ಹೋಮ ಖಂಡಿತ , and more over ನಾನು ಹೇಳುವುದು ಇಲ್ಲ ಬಿಡಿ ಅತ್ಲಾಗ.ಸುಮಾರು ೧೦೦ ರಿಂದ ೧೫೦ ವಿಕಾರಗಳು ನನ್ನ ಮನಸ್ಸು ಹೊಕ್ಕವು , ಅವುಗಳಲ್ಲಿ ಒಂದು ವಿಕಾರ ಮಾತ್ರ ನನ್ನನ್ನು ಈ ಅಲುಗಾಡುವ ಕೈಯಲ್ಲೂ ಬರೆಯುವಂತೆ ಮಾಡಿದೆ . ಏನು ಅಂತೀರಾ?
ಕುಡಿದು ಮಾತಾಡಿದ್ರು ಓಕೆ , ಕುಡಿದು ಬರೆದರೆ ತಪ್ಪೇನು ಅಂಥ ?

 ಕುಡಿದು ಏನು ಬೇಕೋ ಅದು , ಹೇಗೆ ಬೇಕೋ ಹಾಗೆ , ಯಾವ ರೀತಿ ಬೇಕೋ ಆ ರೀತಿ , ಕೆಟ್ಟದಾಗಿ , ಉಚ್ಚವಾಗಿ ಮಾತನಾಡುವವರನ್ನು ನೋಡಿ  ಬೇಸತ್ತು , ಅವರಿಗೆ ಛೀಮಾರಿಯನ್ನು  ಹಾಕಿರುತ್ತೇವೆ ಮತ್ತು ಅವರಲ್ಲಿ ನಿಮಗೆ ಒಂದು ಕ್ಷಮೆ ಇದೆ ಆಲ್ವಾ ? i .e ಕುಡಿದಿದ್ದಾನೆ ಅಂಥ , ಆ ಕ್ಷಮೆ ನನ್ನ ಮೇಲೂ ಇರಲಿ . ಕೆಲವು ಮಾತುಗಳು ಸೂಕ್ಷ್ಮ ವಾಗಿರ್ತ್ತವೆ , ಆದ್ರೆ ಅವನ್ನ ನೀವು ನಿಮ್ಮ ಭೂತ ಕಾಲವೆಂಬ ಕನ್ನಡಿ ಇಂದ ಏನು ನೋಡ್ಕೊಳೋಕೆ ಹೋಗಬೇಡಿ , ಯಾಕಂದ್ರೆ ನಾವೆಲ್ಲಾ ಸಜಿವೀಗಳು ಇರುವುದು ಭೂಮಿಯ ಮೇಲೇನೆ .

 ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಎಂಬ ವಿಷಯಗಳ ಬಗ್ಗೆ ಕೇಳಿರುತ್ತೇವೆ , ಬಹುಷಃ ನಿಮಗೆಲ್ಲರಿಗೂ ಗೊತ್ತು ಇರುತ್ತದೆ, ನನ್ನ ಇಂಗ್ಲಿಷ್ ಮಾಧ್ಯಮದ ಮಿತ್ರರಿಗಾಗಿ , conscious mind and sub conscious mind ಅಂಥ ಅಷ್ಟೇ. ಇವುಗಳ ಬಗ್ಗೆ ನಾನು ನಿಮ್ಮ ಬಳಿ ಚರ್ಚಿಸಲು ಮನೋರೋಗಿನೂ ಅಲ್ಲ ಅಥವಾ ಮನೋವೈಧ್ಯನು ಅಲ್ಲ .ಆದರು ಸಹ ಸ್ವಲ್ಪ ನಾನು ಇದರ ಬಗ್ಗೆ ಬರಿತೀನಿ , ಈ ಎರಡು ಮನಸ್ಸುಗಳಲ್ಲದೆ ಇನ್ನೊಂದು ಇದೆ , ಅದೇ ಅಂತರ್ಮುಖಿ ಮನಸ್ಸು. ಕೆಲವರಿಗೆ ಈ ಮನಸ್ಸು ತಾವು ಬೆಳೆಯುವ ವಾತಾವರಣದಿಂದ ಬಂದಿರುತ್ತದೆ ಅಥವಾ ಅವರು ವಾಸಿಸುವ ಪರಿಸರದ ಪ್ರಭಾವದಿಂದ ಈ ರೀತಿಯ ಪರಿವರ್ತನೆಯಾಗಿರಬಹುದು. ಇವರನ್ನು ರೋಗಿಗಳು ಅಂತ ಕರೆಯಬಹುದು ,ಆದರೆ ವಾಸಿ ಮಾಡಲಾಗದ ರೋಗ ಅಷ್ಟೇ.

 ನನ್ನ ಕುಡಿದ ಮನಸ್ಸಿನ ಪ್ರಕಾರ, ಎಲ್ಲ ಮನಸ್ಸುಗಳು ,ಒಂದಲ್ಲ ಒಂದು ಸಮಯದಲ್ಲಿ ಅಂತರ್ಮುಖಿಯಾಗಿ ವರ್ತಿಸುತ್ತವೆ ಅಥವಾ ವರ್ತಿಸಿರುತ್ತವೆ. ಇದು ನಮ್ಮ ಮನಃಶೈಲಿ, ಇದನ್ನು ಬದಲಿಸಿಕೊಳ್ಳಲು ಕೆಲವರಿಗೆ ಅಥವಾ ಕೆಲವು ಸನ್ನಿವೇಶಗಳಲ್ಲಿ ಸಾಧ್ಯವಾಗುವುದಿಲ್ಲ. ಸೊ , ಇದು ಮಾನವನ ಸಹಜ ಮನೋ ಧರ್ಮ ಅಂಥ ಹೇಳೋಣವೇ ?
ನಮ್ಮ ಮನಸ್ಸು ಕೂಡ ಒಂದು ವಿಷಯ ತೆಗೆದು ಕೊಂಡರೆ , ಅದನ್ನ ಆಳವಾಗಿ ಅಗೆಯಲು ಪ್ರಯತ್ನಿಸುತ್ತದೆ ಆಲ್ವಾ ಈ ಅಗೆಯುವ ಸಂಧರ್ಭದಲ್ಲಿ ಕೆಲವು ತಾತ್ಕಾಲಿಕ ನಿರ್ಣಯಗಳನ್ನ ತೆಗೆದುಕೊಂಡು ಮುಂದೆ ಹೋಗಿರುತ್ತೇವೆ , ಕೆಲವೊಮ್ಮೆ ಆ ನಿರ್ಣಯಗಳೇ ಈ ಅಂತರ್ಮುಖದ ಮೂಲ ಕಾರಣ ವಾಗಬಹುದು. ಸಾಕಪ್ಪಾ, ಸಾಕು ಬಹಳಷ್ಟು ಇದರ ಬಗ್ಗೆ ಬಹಳಷ್ಟು ಮಾತಾಡಿದರೆ ,ನನ್ನ NIMHANS candidate ಅಂಥ ನೀವು ಕರೆದರೂ ಕರೆಯಬಹುದು.ನಾನು ಇಲ್ಲಿಗೆ ಇದರ ಬಗ್ಗೆ ನಿಲ್ಲಿಸಿ ಬಿಡುತ್ತೇನೆ.

 ಅಯ್ಯೋ, ನಾನು ಇಲ್ಲಿ ಕುಡಿರಿ ಅಂಥ ನಿಮಗೆ advertisementu  ಕೊಡ್ತಾ ಇಲ್ಲ ಅಥವಾ ನಾನು ಕುಡಿತಿನಿ , ಕುಡಿದಿದ್ದೀನಿ ಅಂಥ ಹೋಗಳಿಕೆನು ಕೊಡ್ತಾ ಇಲ್ಲ .

 ಯಾರೋ ಮಹಾನುಭಾವರು ಹೇಳಿರೋ ಒಂದು ಸಾಲು ಜ್ಞಾಪಕಕ್ಕೆ ಬಂತು ,
"ಕುಡಿದು ಕುಡಿದು ಕುಣಿದಾಡು ಹೇ ಮನುಜ ,
ಕುಡಿದವನ, ಅರಿತವ ನಿಜಕು ರಾಜ" ,
ನನಗೆ , ಕವಿ ಈ ಸಾಲುಗಳನ್ನ ಯಾವ ಸಂಧರ್ಭದಲ್ಲಿ ಹೇಳಿದ್ದಾರೆ ಅಂಥ ನಿಜವಾಗಲು ಗೊತ್ತಿಲ್ಲ.
ಆದರೆ ಇಲ್ಲಿ ಉಲ್ಲೇಖಿಸಲು ಕಾರಣ, ಕುಡಿದಾಗ ಜನ ತಮ್ಮ ನೋವನ್ನೆಲ್ಲ ಮರೆತು , ಯಾವುದೊ ಹುಚ್ಚು ಧೈರ್ಯದಿಂದ , ಪ್ರಪಂಚಕ್ಕೆ ಸವಾಲೆಸೆಯುವ ಶಕ್ತಿವಂತರಂತೆ ಆಡುತ್ತಾರೆ ಆಲ್ವಾ ?, ಅದೇ ನೀವು ನಿಮ್ಮ ನಿಜ ಜೀವನದಲ್ಲೂ ಧೈರ್ಯವಾಗಿ ಇರಿ , ನೀವು ನೀವಾಗಿರಿ ಅಷ್ಟೇ. ನಮಗೆ ಧೈರ್ಯ ಎಂಬ ಗುಣವನ್ನು ತುಂಬಲು alcohol ನ ಅಗತ್ಯ ಏಕೆ ಬೇಕು? , ಧೈರ್ಯ ಎಂಬ ಅಂಶ ಮನಸ್ಸಿಗೆ ಸಂಬಂದಿಸಿದ್ದು , so alcohol ನ ಹೊಟ್ಟೆಗೆ ಹಾಕ್ಕೊಂಡ್ರೆ kidney, lever ಹಾಳಾಗುತ್ತೆ ಹೊರತು ಧೈರ್ಯ ಎಲ್ಲಿ ಬಂದಿತು.

 ನನಗೂ ಸ್ವಲ್ಪ ಕಿಕ್ಕ್ ಕಡಿಮೆ ಆಯಿತು , ನಾವು ಪಾಚ್ಕೊತಿವಿ. good night.


-- ಗಂಗರಾಜು.ಕು.ಸಿ.

No comments:

Post a Comment