Sunday, October 9, 2011

ಸಣ್ಣ ವ್ಯಥೆ -5

ಅಂದು ಚೀನಾ ಗಡಿಯಲ್ಲಿ ಗುಂಡಿನ ಕಾಳಗ ನಡೆಯುತ್ತಲೇ ಇತ್ತು. ನಿರಂತರ ಮಂಜು, ನಿರಂತರ ಗುಂಡಿನ ಸದ್ದು ಅಲ್ಲಿ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು.ಆದರೆ ಸೈನಿಕ ಸೂರ್ಯಶೇಖರ್ ಇವಕ್ಕೆಲ್ಲ ಅಂಜದೆ ಶತ್ರುಗಳ ಗುಂಪಿನ ಮೇಲೆ ಗುಂಡಿನ ಮಳೆಗೆರೆಯುವಲ್ಲಿ ಮುಂದಾಳಾದರು.ಆ ಕೆಟ್ಟ ಗಳಿಗೆ ಸೂರ್ಯಶೇಖರ್ ರನ್ನು ಬಲಿತೆಗೆದುಕೊಂಡಿತು, ಆ ವೀರ ಮರಣ ಉಳಿದ ಸೈನಿಕರಿಗೆ ಛಲ ಬಿಡದೆ ಹೋರಾಡುವ ಮನಸ್ಥಿತಿ ಕೊಟ್ಟಿತು.ಸುಮಾರು ಮೂರು ದಿನಗಳ ನಂತರ ಸೂರ್ಯ ಶೇಖರ್ ದೇಹವನ್ನು ಅವರ ಹುಟ್ಟುರಿಗೆ ತರಲಾಯಿತು , ಅಂದು ಊರಿನ ಮುಖಂಡರು , ಶಾಸಕರು ಅವರ ಮನೆ ಮುಂದೆ ಜಮಾಯಿಸಿದ್ದರು .ಮಗನ ಕಂಡ ತಾಯಿ ಗರ್ವದಿಂದ ಕಣ್ಣಿರಿಗೆ ಆಸ್ಪದ ಕೊಡದೆ , ತನ್ನ ಎರಡನೇ ಮಗನನ್ನು ಸೇನೆಗೆ ಬಿಳ್ಕೊಟ್ಟಳು.

- ಗಂಗರಾಜು.ಕು.ಸಿ.

No comments:

Post a Comment