Thursday, October 6, 2011

ಸಣ್ಣ ವ್ಯಥೆ -2

ಅಂದು ಶ್ರೀ ರಾಮನವಮಿ , ಬೇಸಗೆಯಲ್ಲೂ ಮೋಡಗಳು ಚಂದ್ರನನ್ನು ಕವಿದಿದ್ದವು .ಊರ ಮುಂದೆ ಜನರೆಲ್ಲಾ ಸಂಪೂರ್ಣ ರಾಮಾಯಣ ನಾಟಕವನ್ನು ನೋಡುತ್ತಿದ್ದಾರೆ . ಆದರೆ ಹೊಗೆಸೊಪ್ಪು ಮಾರುವ ರಾಮಣ್ಣನ ಹೆಂಡತಿ ಸೀತಕ್ಕನನ್ನು ಅವರ ಅತ್ತೆ ನಾಗವ್ವ ಇಲ್ಲ ಸಲ್ಲದ ಆರೋಪ ಹೊರಿಸಿ ಮಗನಿಗೆ ಚಾಡಿ ಸುತ್ತುತಿದ್ದಾಳೆ.ಅತ್ತ , ಸೀತಾ ಮಾತೆಯ ಅಗ್ನಿಪ್ರವೇಶ ಸ್ಥಿತಿಯನ್ನು ನೋಡಿ ಮರುಕ ಪಟ್ಟ ಜನ ಎದ್ದು ತಮ್ಮ ತಮ್ಮ ಮನೆಗಳಿಗೆ ಹೊರಟರು.ನಾಗವ್ವ ತನ್ನ ಪಟ್ಟು ಬಿಡದೆ ಸೀತಕ್ಕನಿಗೆ ಪಾಪಿ ಪಟ್ಟ ಕಟ್ಟಿದಳು , ಅಷ್ಟು ಸಾಲದೆನ್ನುವಂತೆ ಸೀತಕ್ಕನ ಮೇಲೆ ಸೀಮೆ ಎಣ್ಣೆ ಸುರಿದಳು. ಆದರೆ ಜನರು ಮಳೆ ಬರುವ ಮುನ್ನ ಮನೆ ಸೇರಿಕೊಂಡರು.ಚಂದ್ರನನ್ನು ಕಾರ್ಮೋಡಗಳು ಆವರಿಸಿ ಮತ್ತಷ್ಟು ಮಳೆಯಾಯಿತು.

ಗಂಗರಾಜು . ಕು.ಸಿ.


No comments:

Post a Comment