ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ದ್ವೇಷ ಇರುವಾಗ, ವಿಷದ ಮುಳ್ಳಂತೆ ಸೇಡು ಸಿಡಿದಾಗ, ಬದುಕೇ ಹಸಿರು ಪ್ರೀತಿ ಬೆರೆತಾಗ - ಚಿ. ಉದಯಶಂಕರ್ .
Friday, August 31, 2012
Friday, August 24, 2012
ಸಣ್ಣ ವ್ಯಥೆ -24
ಮೋಹನ ಹುಟ್ಟು ಕೋಪಿಷ್ಠ ಎಂದು ಅಮ್ಮನಿಗೆ ದೊಡ್ಡಮ್ಮ ಹೇಳುತ್ತಿದಳು . ಇವನಿಗೆ ಈಗ ಮದುವೆ ಬೇರೆ ಮಾಡ್ತಾ ಇದಿವಿ ಆ ಹುಡುಗಿನ ಚೆನ್ನಾಗಿ ನೋಡ್ಕೊತ್ಹಾನೋ ಇಲ್ವೋ ಎಂದು ತಮ್ಮ ಅಳಲನ್ನು ತೋಡಿಕೊಳ್ಳುವಾಗ , ಕೋಪ ಬಹಳ ಕೆಟ್ಟ ಗುಣ ಕ್ರಮೇಣ ಎಲ್ಲಾ ಸರಿ ಹೋಗುತ್ತೆ ಎಂದು ದೊಡ್ಡಮ್ಮನನ್ನು ಅಮ್ಮ ಸಂತೈಸಿದಳು. ಮೋಹನಣ್ಣನ ಮದುವೆಯಾದ ಹುಡುಗಿ ನನ್ನ ಕ್ಲಾಸ್ ಮೇಟ್ ಪೂಜಾ ಎಂದು ಮದುವೆಯ ದಿನವೇ ತಿಳಿದಿದ್ದು,ಫೋಟೋ ತೆಗೆಸಿಕೊಳ್ಳುವಾಗ ಮೋಹನಣ್ಣ ನನ್ನನ್ನು ತಮ್ಮ ಎಂದು ಪರಿಚಯಿಸಿದಾಗ ಪೂಜಾ ಹಲೋ ಎಂದು ಹೇಳಿ ,ಇವನು ನನ್ನ ಕ್ಲಾಸ್ ಮೇಟ್ ಎಂದು ಮೋಹನಣ್ಣನ ಕಡೆ ನೋಡಿ ನಗೆ ಚೆಲ್ಲಿದಳು.
ಪೂಜಾ ಬಹಳ ಸಂಭಾವಿತೆ ,ಶಾಂತ ಸ್ವಭಾವದವಳು ಮೇಲಾಗಿ ಎಲ್ಲರೊಂದಿಗೂ ಬಹಳ ಸಹನೆಯೊಂದಿಗೆ ತನ್ನ ಕೆಲಸಗಳನ್ನು ಮಾಡುವಂಥ ಹೆಣ್ಣು ಎಂದು ನನಗೆ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗ ತಿಳಿದುಕೊಂಡಿದ್ದೆ, ಇಂಥ ಶಾಂತ ಮೂರ್ತಿಗೆ ಈ ಕೋಪಿಷ್ಠ ಗಂಡನೇ ಎಂದು ನನ್ನ ಉಬ್ಬು ಕೂಡ ಏರಿತ್ತು.
ಮೋಹನಣ್ಣ ಉದ್ಯೋಗದ ನಿಮಿತ್ತ ಅಲ್ಲ ಶೀಘ್ರ ಹಣ ಸಂಪಾದನೆಯ ನಿಮಿತ್ತ ಅಮೆರಿಕಕ್ಕೆ ಹೋದ,ಹಾಗಾಗಿ ಪೂಜಾ ಕೂಡ ಅಮೆರಿಕದಲ್ಲೇ ಉಳಿದಳು.
ಸುಮಾರು ಐದು ವರ್ಷಗಳ ನಂತರ ನನ್ನ ಮದುವೆಗೆಂದು ಮೋಹನಣ್ಣ ತವರಿಗೆ ಹಿಂದಿರುಗಿದ ,ನನ್ನ ಜೀವನ ಕೂಡ ಪ್ರೀತಿ ಪ್ರೇಮಕ್ಕೆ ಹೊರತಾಗಿ ಇರಲಿಲ್ಲ ಹಾಗಾಗಿ ಅಮ್ಮ ಅಪ್ಪ ಏನಾದರು ಮಾಡಿಕೊ ಎಂದು ಮದುವೆಯ ಪ್ರಸ್ತಾವನೆಗೆ ಗೋಣು ಆಡಿಸಿದರು. ಮದುವೆಯ ದಿನ ಮೋಹನಣ್ಣ, ಪೂಜಾಳ ಪ್ರತಿ ಮಾತಿಗೂ ಆಗ
ತಾನೆ ಘಂಟೆ ಕಟ್ಟಿದ ಸೀಮೆ ಹಸದ ಕರುವಿನ ಹಾಗೆ ಗೋಣು ಆಡಿಸುತ್ತಿರುವುದನ್ನ ಕಂಡು ನಾನು ,ಅಮ್ಮ ,ದೊಡ್ಡಮ್ಮ ಸುಸ್ತು ಹೊಡೆದಿದ್ದವು.
ಮೂರ ದಿನದ ಮುಂಚೆ ಅಮ್ಮ ,ಪಕ್ಕದ ಮನೆಯ ಭಾಗ್ಯಮ್ಮನವರಿಗೆ ನಾನು ಬಹಳ ಕೋಪಿಷ್ಠ ,ಮದುವೆಯಾದ ಮೇಲೆ ಪ್ರೀತಿಸಿದ ಆ ಹುಡುಗಿಯನ್ನ ಹೇಗೆ ನೋಡ್ಕೊತ್ಹಾನೋ
ಎಂಬ ಮಾತು ಚಕ್ಕನೆ ಮನದಲ್ಲೇ ಹಾದುಹೋಯಿತು.
--
ಗಂಗರಾಜು.ಕು.ಸಿ
Wednesday, August 1, 2012
ಸಣ್ಣ ವ್ಯಥೆ -23
ಮೂಲೆ ಮನೆ ಮಾದೇವಿ ರಾಗಿ ಬಿಸುತ್ತ ತನ್ನ ಹಳೆ ರಾಗದಲ್ಲಿ ಪಕ್ಕದಲ್ಲಿ ಕುಳಿತು ತಲೆ
ಆಡಿಸುತ್ತಿದ್ದ ಮೊಮ್ಮಕ್ಕಳ ಮುಖ ನೋಡಿ ಕೊಂಡು "ನಿಂಬೀಯಾ ವನದ ಮ್ಯಾಗಳ ಚಂದ್ರಮಾ
ಚೆಂಡಾಡಿದ.." ಎಂದು
ಹಾಡಿ ಕೆಲಸ ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಳು.
ಬಾವಿ ಮನೆ ರಂಗಪ್ಪ ಮುಂಜಾನೆ ೩:೩೦ ಕ್ಕೆ ಸರ್ಕಾರ ಕೊಡುವ ಮೂರು ಫೆಸು ಕರೆಂಟಿಗೆ ,ಹೋದ ವರುಷ ಕೊರೆಸಿದ್ದ ಕೊಳವೆ ಬಾವಿ ಇಂದ ತನ್ನ ಹೊಲಕ್ಕೆ ನೀರು ಹಾಯಿಸಲು ಎದ್ದು ಹೊರಟ,ಇದ್ದ ಹಳೆ ಬಾವಿ ಬತ್ತಿ ಬಹಳಷ್ಟು ವರ್ಷಗಳೇ ಕಳೆದಿದ್ದವು , ಹೋದ ವರ್ಷ ಅಳಿಯ ಮಾದೇಶ ಹೆಂಡತಿಯ ಇಚ್ಚೆಯ ಮೇರೆಗೆ ಮಾವ ರಂಗಪ್ಪನಿಗೆ ಕೊಳವೆ ಬಾವಿ ಕೊರೆಸಿ ಕೊಟ್ಟಿದ್ದ.
ಕಂಡಕ್ಟರ್ ಸಿದ್ದಪ್ಪನ ಮಗ ಪರಮೇಶ ೯ ನೆ ತರಗತಿಯಲ್ಲಿ ಪಾಸಾಗಿ ಊರಿನಲ್ಲಿ ಅತಿ ಹೆಚ್ಚು ಓದಿದವನೆನಿಸಿಕೊಂಡಿದ್ದ, ಊರಿಂದ ಸುಮಾರು ೪ ಮೈಲಿ ದೂರ ಇದ್ದ ಹೊಸೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ
೧೦ ನೆ ತರಗತಿ ಗೆ ಹೋಗುತ್ತಿದ್ದ. ಸಂಜೆ ೬ ಗಂಟೆಗೆ ಹಟ್ಟಿಗೆ ಬರುವ ಪರಮೇಶ ಬುಡ್ಡಿ ದೀಪದಲ್ಲಿ ಓದಿ ಪ್ರತಿದಿನ ಮುಂಜಾನೆ ೬ ಕ್ಕೆ ಮನೆ ಬಿಡುತಿದ್ದ, ಶಾಲೆಯ ಪ್ರಾರ್ಥನೆ ವೇಳೆಗೆ ಸೇರಿಕೊಳ್ಳಲು.
"ರಾಜಧಾನಿ ಬೆಂಗಳೂರಿನಲ್ಲಿ ಜನ ವಿಧಾನ ಸೌಧದ ಮುಂದೆ ನಮಗೆ ತಡೆ ರಹಿತ ವಿದ್ಯುತ್ ಬೇಕೆಂದು ಜನರೆಟರ್ ಬೆಳಕಿನಲ್ಲಿ ಪ್ರತಿಭಟಿಸಿದರು" ಎಂದು ಊರಿನ ಶಾನಭೋಗ ಸುಬ್ಬಣ್ಣ ಬುಡ್ಡಿ ದೀಪದ ಬೆಳಕಿನಲ್ಲಿ ಪತ್ರಿಕೆ ಓದಿಕೊಂಡ.
--
ಗಂಗರಾಜು.ಕು.ಸಿ
ಹಾಡಿ ಕೆಲಸ ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಳು.
ಬಾವಿ ಮನೆ ರಂಗಪ್ಪ ಮುಂಜಾನೆ ೩:೩೦ ಕ್ಕೆ ಸರ್ಕಾರ ಕೊಡುವ ಮೂರು ಫೆಸು ಕರೆಂಟಿಗೆ ,ಹೋದ ವರುಷ ಕೊರೆಸಿದ್ದ ಕೊಳವೆ ಬಾವಿ ಇಂದ ತನ್ನ ಹೊಲಕ್ಕೆ ನೀರು ಹಾಯಿಸಲು ಎದ್ದು ಹೊರಟ,ಇದ್ದ ಹಳೆ ಬಾವಿ ಬತ್ತಿ ಬಹಳಷ್ಟು ವರ್ಷಗಳೇ ಕಳೆದಿದ್ದವು , ಹೋದ ವರ್ಷ ಅಳಿಯ ಮಾದೇಶ ಹೆಂಡತಿಯ ಇಚ್ಚೆಯ ಮೇರೆಗೆ ಮಾವ ರಂಗಪ್ಪನಿಗೆ ಕೊಳವೆ ಬಾವಿ ಕೊರೆಸಿ ಕೊಟ್ಟಿದ್ದ.
ಕಂಡಕ್ಟರ್ ಸಿದ್ದಪ್ಪನ ಮಗ ಪರಮೇಶ ೯ ನೆ ತರಗತಿಯಲ್ಲಿ ಪಾಸಾಗಿ ಊರಿನಲ್ಲಿ ಅತಿ ಹೆಚ್ಚು ಓದಿದವನೆನಿಸಿಕೊಂಡಿದ್ದ, ಊರಿಂದ ಸುಮಾರು ೪ ಮೈಲಿ ದೂರ ಇದ್ದ ಹೊಸೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ
೧೦ ನೆ ತರಗತಿ ಗೆ ಹೋಗುತ್ತಿದ್ದ. ಸಂಜೆ ೬ ಗಂಟೆಗೆ ಹಟ್ಟಿಗೆ ಬರುವ ಪರಮೇಶ ಬುಡ್ಡಿ ದೀಪದಲ್ಲಿ ಓದಿ ಪ್ರತಿದಿನ ಮುಂಜಾನೆ ೬ ಕ್ಕೆ ಮನೆ ಬಿಡುತಿದ್ದ, ಶಾಲೆಯ ಪ್ರಾರ್ಥನೆ ವೇಳೆಗೆ ಸೇರಿಕೊಳ್ಳಲು.
"ರಾಜಧಾನಿ ಬೆಂಗಳೂರಿನಲ್ಲಿ ಜನ ವಿಧಾನ ಸೌಧದ ಮುಂದೆ ನಮಗೆ ತಡೆ ರಹಿತ ವಿದ್ಯುತ್ ಬೇಕೆಂದು ಜನರೆಟರ್ ಬೆಳಕಿನಲ್ಲಿ ಪ್ರತಿಭಟಿಸಿದರು" ಎಂದು ಊರಿನ ಶಾನಭೋಗ ಸುಬ್ಬಣ್ಣ ಬುಡ್ಡಿ ದೀಪದ ಬೆಳಕಿನಲ್ಲಿ ಪತ್ರಿಕೆ ಓದಿಕೊಂಡ.
--
ಗಂಗರಾಜು.ಕು.ಸಿ
Subscribe to:
Posts (Atom)