Sunday, May 8, 2011

ಒಂದು ಅಸ್ಪಷ್ಟ ಲೇಖನ - ಭಾಗ ೧

ಏನೋ  ಮಾಡಲು ಹೋಗಿ ,
ಏನು ಮಾಡಿದೆ ನೀನು ..... ಈ ಸಾಲುಗಳು ನಮ್ಮ ದಿನ ನಿತ್ಯದ ಕೈಂಕರ್ಯ ಗಳನ್ನು  ನೆರವೇರಿಸುವಾಗ , ನಮ್ಮ ಮನಸಿನಲ್ಲಿರುವ ಪಕ್ಷಿ ಹೇಳಿರುತ್ತದೆ ಆಲ್ವಾ ? , ಆ ಸ್ಥಿತಿ ಹೇಗೆ ಒಂದು ಪರಿಸ್ಥಿತಿಯಾಯಿತು ಎಂದು ನಾವು ಊಹಿಸಲು ಸಾಧ್ಯವಿಲ್ಲದಷ್ಟು , ಹಳಸಿಹೋಗಿದ್ದಾಗ , ಈ ಎರಡು ಸಾಲುಗಳು ಮನದ ಪಟಲದಲ್ಲಿ ರಾಗವಾಗುತ್ತ ದೂರವಾಗುವುದು ಆಲ್ವಾ ?

   ಚಿತ್ರ ವಿಚಿತ್ರಗಳ ತಾಣವಾಗಿರುವ ನಮ್ಮ ಮನ , ಪ್ರಾಣ ಎಂಬ ಮಾಯಾ ಜಿಂಕೆಯನು ಉಳಿಸಲು ,ರಕ್ಷಿಸಲು , ಬೆಳೆಸಲು , ಇಲ್ಲದ - ಸಲ್ಲದ - ಒಲ್ಲದ ಎಲ್ಲ ಕೆಲಸಗಳನ್ನು ಮಾಡಿಸುವುದು . ಕೊನೆಗೆ ನೊಂದು-ಬೆಂದು , ನಾವು ನಮ್ಮ ತಾಣವನ್ನು ಕಳೆದುಕೊಂಡಿರುವ ಮಾದರಿಗಳೆಸ್ತೋ .

    ಗಳಿಸಲು - ಗೆಲ್ಲಲು - ಲೋಭದಿ - ಮೋಹದಿ ,ನಮ್ಮ ಮನ ತನ್ನ ಮಡದಿಯಾದ ದೇಹದಿಂದ ದುಷ್ಟ- ಅಸ್ಪಷ್ಟ ಕಾಯಕ ಗಳನ್ನೂ ಮಾಡಿಸಲು ಹಿಂಜರೆಯುವುದಿಲ್ಲ .  ಮಾದರಿಯಾಗಬೇಕದವನೇ/ಳೇ ಮಾನ - ಮರ್ಯಾದೆ ಕಳೆದುಕೊಂಡು , ಮೌನದಿ ಮರೆಯಾಗಬೇಕಾಗುವ ಪ್ರಸಂಗಗಳನ್ನು ನಾವು ಕಂಡಿದ್ದೇವೆ , ನೋಡಿದ್ದೇವೆ ಅಥವಾ ಮೀರಿ ಅನುಭವಿಸಿರುತ್ತೇವೆ .
   
    ಅಲ್ಲಿಗೆ ನಮ್ಮ ಮನವೇ ,ನಮ್ಮ ನಾಶಕ್ಕೆ ಕಾರಣವೇ ?
ನಮ್ಮ ಕರ್ಮದಿ, ನಮ್ಮ ಕಾಯಕದಿ , ನಮ್ಮ ಉಳಿವು -ಗೆಲುವು -ಒಲವು , ಅಡಗಿದೆಯೇ ?
ಅರಿಷಡ್ವರ್ಗಗಳು , ನಮ್ಮನ್ನು ಮಣ್ಣ ಸೇರಿಸಲು ಹೊಂಚು ಹಾಕುತ್ತಿರುತ್ತವೆಯೇ ?
ಈ ಮೇಲಿನ ತ್ರಿಪದಿಗೆ ನನ್ನಲ್ಲಿ ಉತ್ತರವಿದೆಯೇ ? , ಎಂದು ಒಮ್ಮೆ ಯೋಚಿಸಿದಾಗ ................................
ಉದರದ ಮೇಲ್ಭಾಗದಲ್ಲಿ ಒಂದು ಸಣ್ಣ ಆತಂಕದ ಛಾಯೆ .  ಅಸೂಯೆ ,ಕಿಚ್ಚು ಎಂಬ ಎಲ್ಲ ಹೊಲಸುಗಳು , ನಮ್ಮಲ್ಲಿ ಭಯ ಎಂಬ ಭೂತವನ್ನು ಅರಸನನ್ನಾಗಿಸುತ್ತವೆ.

ಏನಿದು ಭಯ , ಎಲ್ಲಿಯದು ಭಯ , ಹೇಗಿರುವುದು ಈ ಭಯ , ಎಂದು ಯಾರು ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಿಲ್ಲ , ಕಾರಣ
ಎಲ್ಲರಿಗು ಉತ್ತರ ತಿಳಿದೇ ಇರುತ್ತದೆ .

ಭವನವಿಲ್ಲದವ ಭಯವ ಗೆದ್ದಾನು ,
ಭಯವಿಲ್ಲದವ ಭೂಮಿಯ ಗೆದ್ದಾನು ...

ಭವನ ಎಂದರೆ ಆಸೆ , ಲೋಭ , ಮೋಹ ಎಲ್ಲವು ಅಡಗಿರುವ ಒಂದು ಮಾಯಾಲೋಕ .

ಬಹಳಸ್ಟು ಸ್ನೇಹಿತರು (ನನ್ನನು ಸೇರಿಸಿಕೊಂಡು ), ಭಯದಿ ಭರವಸೆಯ ಕಳೆದುಕೊಂಡು , ದುಷ್ಟ  ಕಾರ್ಯಗಳಲ್ಲಿ ಕೈ ಜೋಡಿಸಿಕೊಂಡು , ಆತಂಕದಿ - ಅವಸರದಿ ಕಾರ್ಯಗಳ ಮಾಡಿಕೊಂಡು ನಾಟಕೀಯ ಜೀವನವನ್ನು ನಡೆಸುತ್ತಿದ್ದಾರೆ .

ಅಲ್ಲಿಗೆ ಮನುಷ್ಯನಿಗೆ ಭಯದ ಅವಶ್ಯಕತೆ ಇಲ್ಲವೇ ?
ಅಂದರೆ ಭಯವೇ ಬೇಕಾಗಿಲ್ಲವೇ ?
ಈ ಕ್ಷಣಕ್ಕೆ ನನ್ನ ಉತ್ತರ ಕೂಡ ಭಯದಿಂದಲೇ ಹೇಳಬೇಕಾಗಿದೆ .

ಭಯ ಬೇಕು ,ಭಯ ಬೇಕು
ಬೆಳಕನ್ನು ಸೇರಲು , ಭಯದ ನೆರಳು ಬೇಕು .
ಭರವಸೆಯ ನೀರಲು , ಭಯದ ಬಯಕೆ ಬೇಕು .
ಬದಲಾಗಲು , ಭಯದ ಜೊತೆ ಬೇಕು .
ಭಯ ಬೇಕು ,ಭಯ ಬೇಕು .
ಹುಟ್ಟುತ್ತಲೇ ಎಲ್ಲರು ಬುದ್ದಿವಂತರಾಗಿದ್ದರೆ , ಸ್ವತಂತ್ರ ವಾಗಿ ಜೀವಿಸಲು ಸಾಧ್ಯವಿದ್ದಿದ್ದರೆ , ನಮ್ಮ ಸುತ್ತಮುತ್ತಲಿನ ಪರಿಸರವೂ ಸತ್ಯಾ-ನಿಷ್ಟೆ ಇಂದ ಕೂಡಿದ್ದರೆ , ಭಯವೇತಕೆ ಭೂಮಿಯ ಮೇಲೆ ಜೀವಿಸಲು ಎಂದು ಹೇಳಬಹುದಿತ್ತು .  ಆದರೆ ಇಲ್ಲಿ ಇರುವುದು , ಮೂಢರು ತುಂಬಿದ ಸಮಾಜ , ಮೌದ್ಯಥೆಯ ಮಡಿಲು ನಮ್ಮ ಸುತ್ತ ಮುತ್ತಣಗಳು. ಅವಸರ - ಐಶ್ವರ್ಯಕ್ಕೆ , ಆರ್ಯರು -ಅರಸರು ದುರುಳರಾಗುವ ಕಾಲವಿರುವಾಗ , ಭಯ ಬೇಕಲ್ಲವೇ ?

ಅದು ಎಂಥಹ ಭಯ , ಭಯ ಹೇಗಿರಬೇಕು ?

ಆಗ ತಾನೇ ತಾಯಿಯ ಗರ್ಭ ಕೋಶದಿಂದ , ತಾಯಿಯ ಮಡಿಲು ಸೇರಿದ ಮಗು , ಕಿರುಚುತ್ತದೆ . ಅದು ಕೂಡ ಒಂದು ಲೋಕದಿಂದ , ಇನ್ನೊಂದು ಹೊಸ ಮರ್ಮ ಲೋಕಕ್ಕೆ ಬಂದೆನೆಂಬ ಭಯದಿಂದ , ಈ ಭಯ ನಮಗೆ ಬೇಕು , ಈ ಭಯದಲ್ಲಿ ಒಂದು ಸಣ್ಣ ಅರಿವಿದೆ ಮತ್ತು ಮುಗ್ಧತೆಯ ಮೂಲರೂಪವಿದೆ .

ಭಯ ಬಹುರೂಪಿ .

ಬೆಳಕಿಗೆ ಬಂದ ಮಗು , ಭಯವೇ ಇಲ್ಲದ ಹಾಗೆ ಬೆಳಯಲು-ಬೆಳೆಸಲು ಸಾಧ್ಯವಿಲ್ಲ .
ಮಗುವಾದ್ದರಿಂದ ಒಂದು ಆರೋಗ್ಯಕರ ಭಯವೆಮ ವಾತವರಣದಲ್ಲಿ ಬೆಳೆಯಬೇಕಾಗಿರುತ್ತದೆ , ಆದರೆ ಈಗ , ಆರೋಗ್ಯಕರ ಮಾಯವಾಗಿ , ಮಕ್ಕಳು ಮೂಧರಾಗಿ ಬೆಳೆಯುತ್ತಿದ್ದಾರೆ . ನಮ್ಮ ನಾಳೆಯ ಪ್ರಜೆಗಳು ಒಂದು ಸಣ್ಣ ಗತಿಯನ್ನು ಎದುರಿಸಲು ಕಣ್ಣಲ್ಲಿ ಕೊಡಿ ಹರಿಸುತ್ತಿದ್ದಾರೆ.

ಈ ಭಯ ಬೇಡ ನಮಗೆ .
ಮುಂದುವರೆಯುವುದು ....
ನಿಮ್ಮ ಅಭಿಪ್ರಾಯ(ಸದಾಭಿಪ್ರಾಯ  ಅಥವಾ ದುರಾಭಿಪ್ರಾಯ :)ಗಳನ್ನು  ತಿಳಿಸಿ .
 
ಇಂತಿ ನಿಮ್ಮ 
ಗಂಗ