ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ದ್ವೇಷ ಇರುವಾಗ, ವಿಷದ ಮುಳ್ಳಂತೆ ಸೇಡು ಸಿಡಿದಾಗ, ಬದುಕೇ ಹಸಿರು ಪ್ರೀತಿ ಬೆರೆತಾಗ - ಚಿ. ಉದಯಶಂಕರ್ .
Monday, December 31, 2012
Thursday, December 27, 2012
ಅತಿ- ಶಯನ- ಉಕ್ತಿ
ಅತಿ ಆದ್ರೆ ಅಮೃತ ಕೂಡ ವಿಷ ಅಲ್ಲವೇ ? ಎಂಬ ಮಾತು ನನ್ನ ಮನದಲ್ಲಿ ನುಡಿಯುತ್ತಲೇ ಇತ್ತು .
ಏನು ಅತಿ ಮಾಡ್ತಾ ಇದೀನಿ ಎಂದು ಅವಲೋಕನ ಮಾಡಿಕೊಳ್ಳುವ ತಾಳ್ಮೆ ಕೂಡ ನನ್ನಲ್ಲಿ ಮೂಡುತ್ತಿಲ್ಲ.
ಎಂಥಾ ಭಾವ ಇದು ,ನನ್ನ ವರ್ತಮಾನದ ಭಾವನೆಗಳನ್ನ ನನ್ನವೇ ಆದ ಹಳೆಯ ಮಾಸಿದ ನೆನಪುಗಳೆಂಬ ನಿಂತ ನೀರಲ್ಲಿ ಜಾಲಿಸಿ ನೋಡುವುದು,
ಎಂಥಾ ವಿಚಿತ್ರ ಪರಿ ನನ್ನದು ಎಂದು ಚುಚ್ಚುತ್ತಲೇ ಇತ್ತು .
ನನ್ನ ವರ್ತಮಾನಕ್ಕೆ ಭೂತವಿಡಿದಿದೆಯೇ ಹೊರತು ಭವಿಷ್ಯದ ಸ್ಪರ್ಶ ತುಸು ಕೂಡ ಆಗಿಲ್ಲ ಅಂಥಾ,ನನ್ನ ಕೆಲವು ಭಾವನೆಗಳು ಕಲಸಿಹೊಗುತ್ತಿದ್ದವು.
ಇಷ್ಟೆಲ್ಲಾ ಕರ್ಮಕಾಂಡ ನನ್ನ ತಲೆಯಲ್ಲಿ ನಡೆಯುವ ಹೊತ್ತಿಗೆ ,"ಈವಾಗಲೇ ಅರ್ಧ ತಲೆ
ಮೇಲೆ ಕೂದಲು ಇಲ್ಲ ,ಇನ್ನು ಹಿಂಗೆ ಹುಚ್ಚನ ಥರ ಆಡುದ್ರೆ ...."ಎಂದು ಆಗತಾನೆ
ಜನಿಸಿದ ಭಾವಶಿಶು ಅತ್ತು ನಕ್ಕಿತು.
--
ಗಂಗರಾಜು .ಕು.ಸಿ.
Subscribe to:
Posts (Atom)