Thursday, April 28, 2011

ಅಭಿಮಾನಿಯ ಮನದಲ್ಲಿ ...

  ಏನೋ  ಮನಸ್ಸಿಗೆ ನಿರಾಳ, 
ಬೇಸರದಲ್ಲೂ ಸಂತಸದ ಅವಸರ ಬಂದಿತು ಇವರ ನೆನೆದರೆ ,
ಉತ್ಸಾಹದ ಸೆಲೆ ಆ ರೂಪ ,
ನಮ್ಮೆಲರ ಕಥಾನಾಯಕ , 
ಅವರು ಏನೇ ಹೇಳಲಿ , ಅದು ನಮಗೆ ಸಾರ್ವಕಾಲಿಕ ಸತ್ಯ ,
ಅವರೇ ನಮ್ಮ ಪ್ರೀತಿಯ ರಸಿಕರ ರಾಜ ಡಾ  || ರಾಜ್ ಕುಮಾರ್ .

ಸಿಂಗನಲ್ಲುರ್ ಮುತ್ತುರಾಜ್  ಮುಂದೆ ಪ್ರತಿ ಕಲಾ ರಸಿಕನ ,ಮನದ ಕಲಾ ರಾಜನಾಗುತ್ತರೆಂದು ಯಾರು ಭಾವಿಸಿರಲಿಲ್ಲ , ಆದರೆ ಪ್ರಸ್ತುತ ನಮ್ಮ ಭಾಗ್ಯ , ಅವರು ಈಗ ನಟ ಸಾರ್ವಭೌಮ .

ರಾಜಣ್ಣ ನಮಗೆಲ್ಲರಿಗೂ ದ್ರೋಣ ಚಾರ್ಯ ರಂತೆ , ಅವರ ಚಿತ್ರಗಳೇ , ಅವರ ಸಾರ್ಥಕ  ಜೀವನವೆ  . ಅವರ ಹಾವ ಭಾವವೇ , ಅವರ ಮಾತು  ಮತ್ತು  ಅವರ ಕನ್ನಡ ಪ್ರೇಮವೇ ನಮಗೆ ಪರಿಮಿತಿ ಇಲ್ಲದ ಪಾಠ ಗಳು .

ಅವರ ಈ ಚಿತ್ರ ಸರಿ ಇಲ್ಲ ,  ಇದು ಸುಮಾರಾಗಿದೆ , ಅಂತ ಹೇಳಲು ಚಿತ್ರಗಳನ್ನು ನೋಡಿರುವ ಯಾವ ಅಭಿಮಾನಿಯೂ ಒಪ್ಪಲ್ಲ . ಇಂದಿಗೂ ಆ ಎಲ್ಲ ಚಿತ್ರಗಳೇ ನಮ್ಮ ಟಿವಿ ಪರದೆಯ ಹೂ ಗಳು .

ಒಮ್ಮೆ ನನಗೆ ಬೇಜಾರಾಗುತ್ತದೆ , ದುಖ ವಾಗುತ್ತದೆ , ಕಾರಣ ನಾನು ಸ್ವತಂತ್ರ ನಾಗಿ ಸಿನೆಮ ನೋಡೋಹೊತ್ತಿಗೆ  ರಾಜ್ ರ ಯಾವ ಹೊಸ ಚಿತ್ರವೂ ಬಿದುಗಡೆಯಗಲಿಲ್ಲವಲ್ಲ ಎಂಬ ಕೊರಗು . ಅವರ ಕೊನೆ ಚಿತ್ರ ಶಬ್ದವೇಧಿ ಬಿಡುಗಡೆಯಾದಾಗ ನಾನು ೭ ನೆ ತರಗತಿಯಲ್ಲಿ ಓದುತಿದ್ದೆ , ಆಗ first day  first  show ಅಂದ್ರೆ ಮನೆಯಲ್ಲಿ ಬೈಗುಳದ ಮಂತ್ರಾಕ್ಷತೆ ಬೀಳುತ್ತಿದ್ದವು .
ಆದರೆ ನಾನು ಪದವಿ ಓದುವ ಸಂದರ್ಭದಲ್ಲಿ "ಸತ್ಯ ಹರಿಶ್ಚಂದ್ರ " ಚಿತ್ರವನ್ನು ನವರಂಗ್ ಚಿತ್ರಮಂದಿರದವರು "ಕಲರ್ ಸ್ಕೋಪೆ" ಗೊಳಿಸಿ ಮರು ಬಿಡುಗಡೆ ಮಾಡಿದರು . ಆಗ ನನ್ನ ಕೊರಗು , ಕೋರಿಕೆ ಯಾದ , ಅಣ್ಣನ ಚಿತ್ರವನ್ನು   first day  first  show  ನೋಡಿ ಆನಂದಿಸಿದೆ . ಆ ದಿನ ನನ್ನ ಸಂತೋಷಕ್ಕೆ ಪಾರವೇ ಇಲ್ಲ .

ನಾನು ರಾಜ್ ರ ಎಲ್ಲ ಚಿತ್ರ ಗಳ ಬಗ್ಗೆ ಬರೆಯಬಹುದು , ಆದರೆ ಈ blogspot ನವರ ಬಳಿ ಅಸ್ತು ಮಾಹಿತಿ ಇಟ್ಟುಕೊಳ್ಳಲು , ಇವರ ಬಳಿ ಸ್ಥಳದ  ಅಭಾವ ಇದೆ :) , ಹಾಗಾಗಿ ಅವರ ಮೂರ ಚಿತ್ರಗಳ ಬಗ್ಗೆ , ನನ್ನ ಅಭಿಮಾನದ  ದೃಷ್ಟಿ ಇಂದ ಬರೆಯುತ್ತೇನೆ .

ಚಿತ್ರ ೧ )  ರಾಜ್ ರ ಈ ಚಿತ್ರ ಎಂದರೆ ನನಗೆ ಬಹಳ ಇಷ್ಟ , ನನ್ನ ಬ್ಯಾಗಿನಲ್ಲಿ ಈ ಚಿತ್ರದ ಸಿಡಿ ಸದಾ ಇರುತ್ತದೆ . ಈ ಚಿತ್ರದಲ್ಲಿ ರಾಜ್ ರವರ ಪ್ರಸ್ತಾಪಿಸದ ವಿಷಯವಿಲ್ಲ .
ಚಿತ್ರ "ಕಾಮನಬಿಲ್ಲು" ,
ಸ್ನೇಹಿತರೆ , ನೀವು ಯಾರಾದರು ಈ ಚಿತ್ರ ನೋಡಿರದೆ ಇದ್ದರೆ ದಯವಿಟ್ಟು ಇಂದೇ ಸಿಡಿ ಖರಿದಿಸಿ ನೋಡಿ. ಚಿತ್ರ ನೋಡಿದ ಮೇಲೆ ,ನಿಮ್ಮಲ್ಲಿ ಒಂದು ಸುಂದರ ಸ್ವಪ್ನ ಕಂಡಂತಹ ಭಾವನೆ ಮೂಡುತ್ತದೆ .
ಚಿತ್ರದಲ್ಲಿ ರಾಜಣ್ಣನ ಅಭಿನಯ , ಅದು ಪ್ರತಿಯೊಬ್ಬ ಮನುಷ್ಯನ ಸಹಜ  ಸ್ಥಿತಿ ಮತ್ತು ಸ್ವಾಭಾವಿಕ .
ಈ ಚಿತ್ರದಲ್ಲಿ "ಸ್ನೇಹದ " ಬಗ್ಗೆ , "ಯೋಗ ಬ್ಯಾಸದ" ಬಗ್ಗೆ , "ನೇಗಿಲ ಯೋಗಿಯ" ಬಗ್ಗೆ , "ಪ್ರೀತಿಯ " ಬಗ್ಗೆ ,
"ತ್ಯಾಗದ " ಬಗ್ಗೆ , "ಪರೋಪಕಾರದ " ಬಗ್ಗೆ , "ಪ್ರತಿಭಾ ಪಲಯಾನದ "   ಬಗ್ಗೆ , ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮನ ಮಿಡಿಯುವ ಚಿತ್ರ ಕಥೆ ಇಂದ , ಸಿನೆಮ ನೋಡುಗನ ಮನಕ್ಕೆ  ಓರೆ ಹಚ್ಚಲಾಗಿದೆ .  
ಚಿತ್ರದಲ್ಲಿ ರಾಜಣ್ಣನ ಪಾತ್ರವಾದ "ಸೂರಿ " , ನಮ್ಮೆಲರ ಜೀವನದಲ್ಲಿ ಹೊಸ ಚೇತನ ವಾಗಿ ಉಗಮವಾಗುವನೆಂದರೆ  ತಪ್ಪಾಗಲಾರದು . 
ರಾಷ್ಟ್ರ ಕವಿ ಕುವೆಂಪು ರವರ "ನೇಗಿಲ ಯೋಗಿ " ಹಾಡು ಮನ ಮುಟ್ಟುತ್ತದೆ , ಮತ್ತು ಅರ್ಥ ಪೂರ್ಣ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರ ೨ ) ಇದು ರಾಜಣ್ಣ ನಮಗೆಲ್ಲರಿಗೂ ಕೊಟ್ಟಿರುವ ಒಂದು ಉಡುಗೊರೆ ,ಚಿತ್ರದ ಶೀರ್ಷಿಕೆ "ಎರಡು ಕನಸು " .
ಇದು ತ್ರಿವೇಣಿ ಯವರ  ಕಾದಂಬರಿ ಆಧಾರಿತ  ಚಿತ್ರ , ಮೂಲ ಕಥೆಯನ್ನ ಚಿತ್ರದಲ್ಲಿ ಕೊಂಚ ಮಾರ್ಪಾಟು ಮಾಡಲಾಗಿದೆ , ಕಾದಂಬರಿಯಲ್ಲಿ ನಾಯಕನ ಜೀವನದಲ್ಲಿ ,ಎರಡು ಕನಸುಗಳಾಗಿಯೇ ಉಳಿಯುತ್ತವೆ , ಆದ್ರೆ ಚಿತ್ರದಲ್ಲಿ , happy ending ನೀಡಲಾಗಿದೆ , ಆದರು ಚಿತ್ರದ ಹೆಸರು ಸೂಕ್ತ ವಾಗಿಯೇ ಇದೆ.
ರಾಜಣ್ಣ ನ ಅಭಿನಯವನ್ನ  , ಈಗಿನ ಕಾಲದ ಎಲ್ಲ ಭಗ್ನ ಪ್ರೇಮಿಗಳು ನೋಡಲೇ ಬೇಕು . ತೆರೆಯ ಮೇಲೆ ರಾಜಣ್ಣ ನಮ್ಮೆಲರ ಮನ ತುಂಬುತ್ತಾರೆ . ಒಂದು ಉತ್ತಮ ಚಿತ್ರ ನೋಡಿದೆವೆಂಬ ಹಿರಿಮೆ ನಮ್ಮದು .
ನಾನು ಈ ಚಿತ್ರವನ್ನು ಪ್ರಥಮ ಬಾರಿಗೆ ನೋಡಿದ್ದು " ಡಿಡಿ ೧" ರ ಕೃಪಯಿಂದ , ಅದು ಆಗ ಪ್ರಸಾರವಾಗಿದ್ದು ಮಧ್ಯ ರಾತ್ರಿ ೨ ರಿಂದ ೫ ಗಂಟೆ ಯವರೆಗೆ ಎಂದು ನನ್ನ  ಸ್ಮೃತಿ ಈ ಕ್ಷಣಕ್ಕೆ ಹೇಳುತ್ತಿದೆ . ಏನಪ್ಪಾ ಈ ಹೊತ್ತಿನಲ್ಲಿ ಈ ಬಡ್ಡಿ ಮಗ , ಈ ಚಿತ್ರ ಯಾಕೆ ನೋಡಿದ ಅಂತಿರ , ಕಾರಣ ಇಸ್ಟೇ . ಆಗ ಮತ ಎಣಿಕೆ ಕಾರ್ಯ ನಡೀತಾ ಇತ್ತು , ಹಾಗಾಗಿ ಜನರೆಲ್ಲಾ ತಮ್ಮ ತಮ್ಮ ಕ್ಷೇತ್ರದ ಶಾಸಕರ ಬಗ್ಗೆ ತಿಳಿಯಲಿ ಎಂಬ ದೂರದೃಸ್ತಿ ಇಂದ  ಚಿತ್ರ ಪ್ರಸಾರ  ಮಾಡಿದ್ದರು , ಈ ಸನ್ನಿವೇಷ ನಡೆದದ್ದು ೧೯೯೬ ರಲ್ಲಿ :) 

ಚಿತ್ರ ೩) ರಾಜಣ್ಣ ರ ಈ ಚಿತ್ರ ದ ಬಗ್ಗೆ ನಾನು ಬರೆಯಲೇ ಬೇಕು . ಈ ಚಿತ್ರದ ಬಗ್ಗೆ ಎಲ್ಲರು , ಇದು ಇಷ್ಟು ದಿನ ಚಿತ್ರ ಮಂದಿರದಲ್ಲಿ ಓಡಿದೆ , ಇದು ಇಂಥಹ ದಾಖಲೆ , ಅಂಥಹ ದಾಖಲೆ ಎಂದು ಬೀಗುತ್ತಾರೆ .
 ನನ್ನ ಪ್ರಕಾರ , ಈ ಚಿತ್ರ ಒಂದು ಸಾರ್ವಕಾಲಿಕ  ಸತ್ಯ , ಮರಳಿಗೂಡಿಗೆ   ಎಂದು .
ಬಹುಷಃ ಚಿತ್ರದ ಹೆಸರು , ನಿಮಗೆ ಗೊತ್ತಾಗಿದೆ , ಹೌದು ಇದು " ಬಂಗಾರದ ಮನುಷ್ಯ " .
ಇದು ಕೂಡ ಕಾದಂಬರಿ ಆಧಾರಿತ ಚಿತ್ರ , ಅತ್ಯುತ್ತಮ ಚಿತ್ರ ಕಥೆ ಇಂದ ರೂಪು ಗೊಂಡ ಒಂದು ಉತ್ತಮ ಚಿತ್ರ .
ಈ ಚಿತ್ರ ದಲ್ಲಿ "ರಾಜೀವ " ನಾಗಿ ರಾಜಣ್ಣ ನಮ್ಮ ಕಣ್ಣು ಕಟ್ಟುತ್ತಾರೆ .
ರಾಜಣ್ಣ , ಬಾಲಣ್ಣ ಮತ್ತು ಭಾರತಿ ಯವರು ಉತ್ತಮವಾದ ಅಭಿನಯ ನಮ್ಮ ಮನಸೂರೆ ಗೊಳ್ಳುತ್ತದೆ .
ಪಟ್ಟಣದಲ್ಲಿ ಕೆಲಸ ಮಾಡುತಿದ್ದ ಎಸ್ಟೋ ರೈತರ ಮಕ್ಕಳು , ಮರಳಿ ಬೇಸಾಯಕ್ಕೆ ಮರಳಿದರು ಎಂಬುದು  , ಈ ಚಿತ್ರದ ಪರಿಣಾಮ .

ಎಂತಹ ಅದ್ಭುತ ಚೇತನ ಅಣ್ಣಾವ್ರ ಚಿತ್ರಗಳು , 
ಪ್ರತಿ ಅಭಿಮಾನಿಯ ಚಿಂತನೆ ಗಳೆಲ್ಲವೂ , ರಾಜ್ ರವರ ಯಾವುದೋ ಚಿತ್ರದಿಂದ ಪ್ರೇರೇಪಿತವಾಗಿಯೇ ಇರುತ್ತವೆ .

ನೀವು ದಯವಿಟ್ಟು ಈ ವೀಡಿಯೊ ಗಳನ್ನೂ ನೋಡಿ , ರಾಜರ ಚಿತ್ರಗಳು ಏನು , ಹೇಗೆ , ಎಂದು ತಿಳಿಯುತ್ತದೆ .
ದಯವಿಟ್ಟು ಈ ಸಂಚಿಕೆಯನ್ನ  , ಪೂರ್ತಿಯಾಗಿ ನೋಡಿ .
ರಾಮ್ ಪ್ರಸಾದ್ ರನ್ನು  ಉತ್ತಮ ಮನುಷ್ಯರನ್ನಾಗಿಸಿದ ರಾಜ್ ಮತ್ತು ರಾಜ್ ರ ಚಿತ್ರಗಳು .

ಅಭಿಮಾನಿಗಳು ರಾಜ್ ರನ್ನು ತಮ್ಮ ಮನಸ್ಸಿನಲ್ಲಿ  ಪ್ರತಿಷ್ತಾಪಿಸಿಕೊಂಡಿದ್ದಾರೆ    , ಮತ್ತು ನಿತ್ಯವು  ಪೂಜಿಸುತ್ತಾರೆಂಬುದಕ್ಕೆ         ಇದೊಂದು ಉತ್ತಮ ಸಾಕ್ಷಿ .    

ಸರಳತೆಯ ಪ್ರತಿರೂಪ  Dr ರಾಜ್ ರವರ ಜೀವನ ಶ್ಯಲಿ  ಮತ್ತು ಅವರ ಮಾತುಗಳು  , ಎಂಬುದು  ಅವರ ಬೃಹತ್  ಬೆಳವಣಿಗೆಗೆ ಸೂತ್ರ  ಎಂದರೆ ತಪ್ಪಾಗಲಾರದು . ಅವರ ಸರಳತೆ, ನಮಗೆಲ್ಲ  ಬದುಕ ಕಲಿಸುವ ಪಾಠವಾಗಬೇಕೆಂಬುದು  ನನ್ನ ಆಶಯ  .
ಒಂದು ಮುತ್ತಿನ ಕಥೆ , ಸಾಕ್ಷಾತ್ಕಾರ  , ಬೇಡರ ಕಣ್ಣಪ , ಚಲಿಸುವ ಮೋಡಗಳು , ಮಯೂರ  , ನಾಂದಿ , ಜೀವನ ಚೈತ್ರ , ಹುಲಿಯ ಹಾಲಿನ ಮೇವು , ಬಬ್ರು ವಾಹನ, ಸಂಪತ್ತಿಗೆ ಸವಾಲ್ , ಗಿರಿ ಕನ್ಯೆ  ಚಿತ್ರಗಳ ಬಗ್ಗೆ ಇಲ್ಲಿ ನಮೂದಿಸಲು ನಾನು ಇಷ್ಟ ಪಡುತ್ತೇನೆ .

ಅದು ನಾನು ೮ ನೆ ತರಗತಿಯಲ್ಲಿ ಓದುತ್ತಿದ್ದೆ , ನಮಗೆ english grammer ಗೆ ಸಂಬಂಧ ಪಟ್ಟ ಹಾಗೆ " How to use phrases "not only" and "but also " in combining two sentences " ಎಂಬ ವಿಷಯದ ಬಗ್ಗೆ ಪಾಠ ಮಾಡುತ್ತಿದರು . ನಮ್ಮ ಶಿಕ್ಷಕಿ ಹೇಳಿದ ಮಾದರಿ , ಈಗಲೂ ನನ್ನ ಮನದಲ್ಲಿ ಇದೆ .
"Dr RajKumar is not only an actor ,but also a singer." ಎಂದು , ಆಗಲೇ ನನ್ನ ಮಂಕು ದಿಣ್ಣೆ ಗೆ ತಿಳಿದಿದ್ದು ಅಣ್ಣ ಹಾಡುತ್ತರೆಂದು .ನನ್ನ ಈ ಅಜ್ಞಾನಕ್ಕೆ ಕಾರಣ , ರಾಜ್ ಮತ್ತು ಪಿ ಬಿ ಶ್ರೀನಿವಾಸ್ ರ ಕಂಠ  ದಲ್ಲಿ ಹೋಲಿಕೆಗಳಿವೆ . ಇದು ಸ್ವತಃ ರಾಜ್ ಕೂಡ ಒಪ್ಪಿಕೊಂಡಿದ್ದಾರೆ , ಇದು ರಾಜ್ ರ ದೊಡ್ಡ ಗುಣ .

Dr  ರಾಜ್ ಎಂತಹ ಗಾಯಕರೆಂದರೆ , ದಯವಿಟ್ಟು ಈ ಮೂರು ಹಾಡುಗಳನ್ನು ಕೇಳಿ ,
೧) ನಾದಮಯಾ ಈ ಲೋಕವೆಲ್ಲಾ ...   Song - click here
೨) ದೇಹ ವೆಂದರೆ ಓ ಮನುಜ ..   Song - click here
೩) ಮೇಘಮಾಲೆ ... Song - click here
 ಈ ಮೂರು ಹಾಡುಗಳಲ್ಲಿ , ರಾಜ್ ರ  ಕಂಠ ಸ್ಥಿತಿ , ಗಾನ ಪ್ರೌಢಿಮೆ ಬಗ್ಗೆ , ವಾಹ್ ಎಂದು ಹೇಳುತ್ತಿರಿ .
ರಾಜ್ ರ ಚಿತ್ರದ ಗೀತೆಗಳಲ್ಲಿ ಸಾಹಿತ್ಯ ಉತ್ತಮ , ಅತ್ಯುತ್ತಮ . ಎಲ್ಲ ಗೀತೆಗಳು ನಮಗೆ ಜೀವನವನ್ನ ಕಲಿಸುತ್ತವೆ .
ಇಲ್ಲಿ ನಾವು ಚಿ. ಉದಯಶಂಕರ್ ರವರನ್ನು  ನೆನಪಿಸಿಕೊಳ್ಳಲೇಬೇಕು. 
ಕನ್ನಡಕ್ಕೆರಾಜ್ ರ ಕೊಡುಗೆ ಅಪಾರ , ಈ ಅಪಾರತೆ ಗೆ ಪಾರದರ್ಶಕ ನಮ್ಮ ಮನಸ್ಸುಗಳಾಗಬೇಕು. ಇದಕ್ಕೆ ಸೂಕ್ತ ಉದಾಹರಣೆ ಗೋಕಾಕ ಚಳುವಳಿ ಯಲ್ಲಿ ರಾಜ್ ರ ಸಕ್ರಿಯ ಪಾತ್ರ  . 

ಕನ್ನಡಕ್ಕೆ ಇವರು ಕೊಟ್ಟ ಗೌರವ ಹೇಗಿತ್ತೆಂದರೆ , ಇವರು ಅಭಿನಯಿಸಿದ ಎಲ್ಲ ಚಿತ್ರಗಳು ಕನ್ನಡ ಚಿತ್ರಗಳೇ ಆಗಿದ್ದವು , ಎಂಬುದು ನಮಗೆಲ್ಲ ಸಂತೋಷ ಕೊಡುವ ಸಂಗತಿ .
ನಾವು ಕೂಡ ರಾಜ್ ರಂತೆ ಕನ್ನಡ ದ ಬಗ್ಗೆ ಅಭಿಮಾನ ಇಮ್ಮಡಿ ಗೊಳಿಸಿಕೊಳ್ಳಬೇಕು.
ದಯವಿಟ್ಟು  ಮಕ್ಕಳಿಗೆ , ಡಾ ರಾಜ್ ಕುಮಾರ್ ರಂತಹವರ ಬಗ್ಗೆ ತಿಳಿಸಿ , ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳು ಕಲಿಯಲು ಅವಕಾಶ ಮಾಡಿಕೊಡಿ . 

ನನ್ನ ಈ ಪುಟ್ಟ ವ್ಯಾಖ್ಯಾನದ ಕೊನೆಯ ಮಾತು ,
ರಾಜ್ ರ ಚಿತ್ರಗಳು ನಮಗೆ ಮಾದರಿ ,
ರಾಜ್ ರ ಸರಳ ಜೀವನ ನಮಗೆ ದಾರಿ ,
ನಿಮಗಾಗಿ , ಜನುಮದ ಜೋಡಿ ಚಿತ್ರದ ಡಾ|| ರಾಜ್‍ ಹಾಡಿರುವ ಗೀತೆಯ ಸಾಹಿತ್ಯ .

ಚಿತ್ರ: ಜನುಮದ ಜೋಡಿ
ಹಾಡಿರುವವರು: ಡಾ|| ರಾಜ್‍ಕುಮಾರ್
ಸಂಗೀತ: ವಿ.ಮನೋಹರ್
ಸಾಹಿತ್ಯ: ವಿ.ಮನೋಹರ್

ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪ ದೀಪದಿ ಶಿವನಿಲ್ಲ
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪ ತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣ ಕಣದಲ್ಲು ಜೀವ ಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು
ದೇಹವೆಂದರೆ....
ಮೇಳು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲ ವ್ಯಾಕುಲಗಳು ಸರಿಯೇನು
ರೋಷ ದ್ವೇಷದ ಉರಿಯು ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ಇಂತಿ  ನಿಮ್ಮ ,
ಗಂಗ.