ತನು ಕರಗಿದಾಗ
ಜೀವದ ವೀಣೆ ಮೀಟಿದಾಗ , ದೇಹದಲ್ಲಿ ಜೀವವೇ ನಿಂತಾಗ ,
ನಿನ್ನ ಚೆಲುವೆ ನನ್ನ ಎಬ್ಬಿಸಿತು , ಪ್ರೇಮವೆಂಬ ಸಾಮ್ರಾಜ್ಯದಿಂದ || ||
ಜೀವ ಜೀವಕೂ , ಭಾವ ಭಾವನೆಗಳಿಗೂ
ಅತೀತವಾದ ನನ್ನ ಪ್ರೀತಿ ನಿನ್ನ
ಮನಕ್ಕೆ ತೃಪ್ತಿ ಕೊಟ್ಟರೆ ನಾ ಧನ್ಯ ,
ಉತ್ಪ್ರೇಕ್ಷೆಗೆ , ರೂಪಕಕ್ಕೆ ನಿನ್ನ ಬರೆಯಲು
ನನ್ನಲ್ಲಿ ಭಾವನೆಗಳು ಇಲ್ಲದಾಗಿವೆ
ಈ ಪ್ರೇಮಪಾಶದಿಂದ ದಯವಿಟ್ಟು ನನ್ನ ಮುಕ್ತ ಗೊಳಿಸು
ಹೆಸರಿಗೆ, ಉಸಿರಿಗೆ, ಹಸಿರಿಗೆ, ಮನಸಿಗೆ
ಮೆದುಳಿಗೆ , ನನ್ನ ಕರ್ಮಕ್ಕೆ
ನೀನು ನನ್ನ ನೆಲವಾದೆ ,
ಚೆಲುವೆ ನಿನ್ನ ನೋಡಲು ನನ್ನ ಮನ ಹಂಬಲಿಸುತಿದೆ ............
ಹೀಗೆ ಎನ್ನ ಮನದ ಮತ್ತಷ್ಟು ವ್ಯಥೆ ಗಳು ,
ರೆಪ್ಪೆಯ ಮೇಲಿರುವ ಎನ್ನ ಚೆಲುವೆ ,
ನನ್ನ ಕಣ್ಣಿಗೆ ಕಾಣದಾಹಿಳು
ನನ್ನ ಎಲ್ಲ ಆಲೋಚನೆಗಳಲ್ಲಿ ಹುದುಗಿರುವ ನನ್ನ ಚೆಲುವೆ
ಮನದಲ್ಲಿ ಅಚ್ಚಾಗಿರುವಾಗ , ಕಣ್ಣ ದೃಷ್ಟಿಯಲ್ಲಿ ಏನಿದೆ ಸೊಗಸು ||
ಚೆಲುವೆಯ ಅಂದ ನನ್ನ ಮನದಲ್ಲಿ
ಆಸೆ , ಬಯಕೆ ಉಂಟು ಮಾಡಿದೆ
ಆದರೆ ಚೆಲುವೆಯ ನೆನದಲ್ಲಿ , ನನ್ನ ಮನದಲ್ಲಿ,
ಎನ್ನ ಇರುವಿಕೆಯೇ ಇಲ್ಲದಂತಾಗುತ್ತದೆ ||
ನನ್ನ ಕಣ್ಣಿಗೆ ಬಿದ್ದ ಎಲ್ಲ ಚೆಲುವೆಯರಿಗೆ , ನನ್ನ ಕವನಗಳು ಅರ್ಪಣೆ ......................
ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ದ್ವೇಷ ಇರುವಾಗ, ವಿಷದ ಮುಳ್ಳಂತೆ ಸೇಡು ಸಿಡಿದಾಗ, ಬದುಕೇ ಹಸಿರು ಪ್ರೀತಿ ಬೆರೆತಾಗ - ಚಿ. ಉದಯಶಂಕರ್ .
Thursday, December 30, 2010
Sunday, December 19, 2010
ನಿಜ ಸ್ವಾಮಿ ಇದು ಸತ್ಯ !
ನಮಗೆ ಸ್ವಾತಂತ್ರ ಬಂದಿದೆ ,ನಾವು ಭಾರತೀಯರು ,ನಾವು ಸ್ವತಂತ್ರರು ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬರಬಹುದು ಎಂಬ ಭಯದಿಂದ ಈ ಲೇಖನವನ್ನು ಬರೆಯಲು ಸಜ್ಜಾಗುತ್ತಿದೇನೆ .
ಪರಕೀಯರಿಂದ ನಮ್ಮ ದೇಶವನ್ನ ನಮ್ಮ ಕೈಗೆ ತೆಗೆದುಕೊಂಡ ಕಾಲದಿಂದ ನಮಗೆ ತೊಂದರೆಗಳು ಒಂದರ ನಂತರ ಒಂದರಂತೆ ಪುಂಖಾನುಪುಂಖವಾಗಿ ಒಕ್ಕರಿಸುತ್ತಿವೆ. ಇದರ resulte , ನಮ್ಮ ದೇಶ ಈಗಲೂ ಅಭಿವೃದ್ದಿಗೊಳುತಿರುವ ರಾಷ್ಟ್ರ . ಇನ್ನು 30 ವರ್ಷಗಳ ನಂತರವೂ ನಮ್ಮ ದೇಶ ಅಭಿವೃದ್ದಿಗೊಳುತ್ತಿರುವ ರಾಷ್ಟ್ರವಾಗಿಯೇ ಉಳಿಯುವುದು ಎಂಬುದು ವಿಷಾದದ ಭವಿಷ್ಯ .
ಏನು ಮಾಡೋದು ಸ್ವಾಮಿ ನಮ್ಮ ದೇಶದಲ್ಲಿ ಸಂಪತ್ತೆ ಇಲ್ಲ . ಇದ್ದ ಸಂಪತ್ತೆಲ್ಲ ಪೂರ್ವ ಸ್ವತಂತ್ರ ಕಾಲದಲ್ಲೇ ನಮ್ಮ ದೇಶದಿಂದ ಕೊಳ್ಳೆ ಹೊಡೆದಿದ್ದಾರೆ ಎಂದು ನೀವು ಕೇಳಬಹುದು , ಇದಕ್ಕೆ ನನ್ನ ಉತ್ತರ iste , ಒಂದು ದೇಶದ ಅತಿ ದೊಡ್ಡ ಸಂಪತ್ತು ,ಮಾನವ ಸಂಪನ್ಮೂಲ ಸಂಪತ್ತು , ಈ ಸಂಪತ್ತನ್ನ ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದಲ್ಲಿ ,ಅದು ಎಂಥಹ ದೇಶವೇ ಆಗಿರಲಿ ,ಅದು ಒಂದು supernatural power ಆಗಿ ಹೊರ ಹೊಮ್ಮಲಿದೆ ಎಂಬುದು ಸಾರವಕಾಲಿಕ ಸತ್ಯ , ಇದು ನಾನು ಹೇಳ್ತಿರೋದು ಅಲ್ಲ ಸ್ವಾಮಿ.
ಬಿಡಿ , ದೇಶದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿಯು ನಾನಲ್ಲ ಮತ್ತು ನನ್ನಲ್ಲಿ ಅಂಥಹ ಪಾಂಡಿತ್ಯವು ಇಲ್ಲ , ಒಂದಂತು ನಿಜ "ಪ್ರಜೆ ಪ್ರಜ್ಞಾವಂತ ನಾದರ ,ದೇಶವು ಪ್ರಜ್ವಲಿಸುತ್ತದೆ" ಎಂದು.
ಈಗ ವಿಷಯಕ್ಕೆ ಬರೋಣ ,
ಮೊನ್ನೆ ಶುಕ್ರವಾರ ಚಿತ್ರರಸಿಕರಿಗೆ ಡಬಲ್ ಧಮಾಕ , ಅಂದು ಬಹುನಿರೀಕ್ಷಿತ , ಉಪೇಂದ್ರರ ಹೆಸರಿಡದ ಚಿತ್ರದ ಬಿಡುಗಡೆ ಮತ್ತು ಅಂದೇ ಒಂದು ತೆರೆಮರೆಯಲ್ಲಿ , ಕಣ್ಣಂಚಿಗೆ ಹತ್ತಿರವಾದ ಚಿತ್ರ "ಖೆಲೆನ್ ಹುಂ ಜಿ ಜಾನ್ ಸೆ" ಚಿತ್ರದ ಬಿಡುಗಡೆ.
ಇಲ್ಲಿ ನಾನು ಒಂದು ಪದವನ್ನು ಉಪಯೋಗಿಸಿದೆ , ಕಣ್ಣಂಚು , ಈ ಪದಕ್ಕೆ ಅಭೂತಪೂರ್ವ ಅರ್ಥವಿದೆ .
ನೀವು ಒಂದು ವಸ್ತುವನ್ನ ಕಣ್ಣಿನಿಂದ ನೋಡಬಹುದು , ಇದು ಪ್ರತಿ ಜೀವಿಗೂ ಗೊತ್ತಿರುವ ವಿಷಯ ( ಬೇರೆ ಹೇಳೋ ) ,
ಓಕೆ ಸರಿ ಸ್ವಾಮಿ ,
ಹಾಗೆ, ಅದು ಒಂದು ಕೆಲವು ಮೀಟರ್ ಗಳಷ್ಟು , ಕೆಲವು ಸೆಂಟಿ ಮೀಟರ್ ಗಳಷ್ಟು ದೂರವಿದ್ದರೆ ನಾವು ಅದನ್ನ ನೋಡಬಹುದು , ವಸ್ತುವಿನ ಗಾತ್ರವನ್ನ ನಾವು ಗಣನೆಗೆ ತಗೆದುಕೊಂಡೆವು ಎಂಬೋಣ .
ಅದೇ ವಸ್ತುವನ್ನ ನಿಮ್ಮ ಕಣ್ಣ ಅಂಚಿನಲ್ಲಿ ಇಟ್ಟು ಗಮನಿಸಿ , ಅಲ್ಲಿ ನಿಮ್ಮ ದೃಷ್ಟಿಕೋನ ಶೂನ್ಯವಾಗುತ್ತದೆ , ಆಗ ಏನು ಕಾಣಸಿಗುವುದಿಲ್ಲ .
ಅಂದರೆ ನಮ್ಮ ಜೀವನಕ್ಕೆ , ನಮ್ಮ ಭಾವನೆಗಳಿಗೆ ಹತ್ತಿರವಾದ ವಿಷಯಗಳನ್ನ ನಾವು ಬಹುಬೇಗನೆ ಕಂಡುಕೊಳ್ಳಲು ಮತ್ತು ಅದರ ಬೆಲೆ ತಿಳಿಯಲು ಅಷ್ಟು ಬೇಗ ಸಾಧ್ಯವಾಗುವುದಿಲ್ಲ , ಕಾರಣ ಅವು ನಮ್ಮಲ್ಲಿ ಹುದುಗಿಬಿತ್ತಿವೆ .
ಇಲ್ಲಿ ನಾನು ಮಾತನಾಡುತ್ತಿರುವುದು ನಮ್ಮ ದೇಶದ ಸ್ವತಂತ್ರ ಸಂಗ್ರಾಮ ಕಲಿಗಳ ಬಗ್ಗೆ.
correct ಅಲ್ವ ?
1947 ಆಗಸ್ಟ್ 15 ರಂದು midnight ನಮಗೆ ಸ್ವತಂತ್ರ ಬಂದಿದೆ ಎಂದು ತಿಳಿದು , ವರ್ಷಕ್ಕೊಮ್ಮೆ ರಜೆ enjoy ಮಾಡುವ ಕಾಲದಲ್ಲಿ ನಾವು ಇದ್ದೇವೆ ,ಅದು ಪ್ರಸಕ್ತ ಮತ್ತು ದುರದೃಸ್ಟಕರ .
ಆದರೆ ಈ ಆಗಸ್ಟ್ 15 ,ಒಂದು ಸುವರ್ಣ ದಿನವಾಗಲು ಶ್ರಮಿಸಿದವರು ಅನೇಕರು , ಅಂಥಹ ಅನೇಕರಲ್ಲಿ ಒಬ್ಬರ ಕಥೆ ಯನ್ನ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.
ಇದು ಸತ್ಯ ಕಥೆ ಸ್ವಾಮಿ !!!!!!!!!
ಈ ಚಿತ್ರದ ಬಗ್ಗೆ ಹೇಳ್ತಿನಿ , ಈ ಚಿತ್ರವೂ ಒಂದು ಸತ್ಯ ಕಥೆ , ಸತ್ಯ ಕಥೆ ಆಧಾರಿತ ಚಿತ್ರ . ಇದು 1930 ರಿಂದ 1934 ರವರೆಗೆ ಬಂಗಾಳದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಒಂದು ಪುಟ . ಈ ಪುಟ ದ ಅಸ್ತಿತ್ವ ದ ಬಗ್ಗೆ ಬಹು ಮಂದಿಗೆ ತಿಳಿದೇ ಇಲ್ಲ , ಕಾರಣ ತಿಳಿದಿಲ್ಲ .
ಇದನ್ನ ಪುಸ್ತಕ ರೂಪದಲ್ಲಿ ಬರೆದವರು Manini chatterjee , ಪುಸ್ತಕದ ಹೆಸರು DOandDIE: ದಿ chittagong uprising ,
ಹೆಸರೇ ಹೇಳುವಂತೆ ಇದು ಸ್ವಾತಂತ್ರಕ್ಕಾಗಿ ಪ್ರಾಣದಾನ ಮಾಡಿದವರ ಕಥೆ.
ಇಲ್ಲಿ ನಾನು ಕಥೆ ಹೇಳಲು ಇಚ್ಚಿಸುವುದಿಲ್ಲ , ದಯವಿಟ್ಟು ಒಮ್ಮೆ ಚಿತ್ರಮಂದಿರದಲ್ಲಿ ಚಿತ್ರ ನೋಡಿ,
ಸ್ವತಂತ್ರ ಎಂಬುವ ಪದದ ಅರ್ಥ ತಿಳಿವುದು , ತ್ಯಾಗ ಎಂಬ ಪದದ ಅರ್ಥ ತಿಳಿವುದು .
ಎಂದಿನಂತೆ ಅಶುತೋಷ್ ಗೊವಾರಿಕರ್ , ಒಬ್ಬ ಉತ್ತಮ ನಿರ್ದೇಶಕ ಎಂದು ನಿರೂಪಿಸಿದ್ದಾರೆ .
ಚಿತ್ರ ರಸಿಕರು , ದೇಶ ಭಕ್ತರು , ಕಾಂಗ್ರೆಸ್ಸಿಗರು , BJP ಗಳು , communistaru , ಓಟು ಹಾಕದವರು , ಓಟು ಹಾಕುವವರು , ಓಟು ಹಾಕಲು ಅರ್ಹತೆ ಇಲ್ಲದವರು , ನಮ್ಮ ದೇಶ ಭಾರತ ಎಂದು ತಿಳಿದವರು ,ಸಾಮಾನ್ಯ ಮನುಷ್ಯರು ಎಲ್ಲರು ಚಿತ್ರ ನೋಡಿ ,
ಏನಾದರು ಚಿತ್ರದಲ್ಲಿ ಕಲಿಕೆ ವಸ್ತು ವಿದ್ದರೆ ಕಲಿಯಿರಿ .
ಸ್ವಲ್ಪ emotional ಅಗಿಬಿಡ್ತ್ಹಿವಿ ಅಲ್ವ , ದೇಶದ ವಿಷಯಕ್ಕೆ ಬಂದಾಗ !!!!!!!!!!!!!!!!!!!!!!!!!!!!!!
ಸಿಗೋಣ ಮತ್ತೆ , ಇಂತಿ ನಿಮ್ಮ
ಗಂಗ
ಪರಕೀಯರಿಂದ ನಮ್ಮ ದೇಶವನ್ನ ನಮ್ಮ ಕೈಗೆ ತೆಗೆದುಕೊಂಡ ಕಾಲದಿಂದ ನಮಗೆ ತೊಂದರೆಗಳು ಒಂದರ ನಂತರ ಒಂದರಂತೆ ಪುಂಖಾನುಪುಂಖವಾಗಿ ಒಕ್ಕರಿಸುತ್ತಿವೆ. ಇದರ resulte , ನಮ್ಮ ದೇಶ ಈಗಲೂ ಅಭಿವೃದ್ದಿಗೊಳುತಿರುವ ರಾಷ್ಟ್ರ . ಇನ್ನು 30 ವರ್ಷಗಳ ನಂತರವೂ ನಮ್ಮ ದೇಶ ಅಭಿವೃದ್ದಿಗೊಳುತ್ತಿರುವ ರಾಷ್ಟ್ರವಾಗಿಯೇ ಉಳಿಯುವುದು ಎಂಬುದು ವಿಷಾದದ ಭವಿಷ್ಯ .
ಏನು ಮಾಡೋದು ಸ್ವಾಮಿ ನಮ್ಮ ದೇಶದಲ್ಲಿ ಸಂಪತ್ತೆ ಇಲ್ಲ . ಇದ್ದ ಸಂಪತ್ತೆಲ್ಲ ಪೂರ್ವ ಸ್ವತಂತ್ರ ಕಾಲದಲ್ಲೇ ನಮ್ಮ ದೇಶದಿಂದ ಕೊಳ್ಳೆ ಹೊಡೆದಿದ್ದಾರೆ ಎಂದು ನೀವು ಕೇಳಬಹುದು , ಇದಕ್ಕೆ ನನ್ನ ಉತ್ತರ iste , ಒಂದು ದೇಶದ ಅತಿ ದೊಡ್ಡ ಸಂಪತ್ತು ,ಮಾನವ ಸಂಪನ್ಮೂಲ ಸಂಪತ್ತು , ಈ ಸಂಪತ್ತನ್ನ ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದಲ್ಲಿ ,ಅದು ಎಂಥಹ ದೇಶವೇ ಆಗಿರಲಿ ,ಅದು ಒಂದು supernatural power ಆಗಿ ಹೊರ ಹೊಮ್ಮಲಿದೆ ಎಂಬುದು ಸಾರವಕಾಲಿಕ ಸತ್ಯ , ಇದು ನಾನು ಹೇಳ್ತಿರೋದು ಅಲ್ಲ ಸ್ವಾಮಿ.
ಬಿಡಿ , ದೇಶದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿಯು ನಾನಲ್ಲ ಮತ್ತು ನನ್ನಲ್ಲಿ ಅಂಥಹ ಪಾಂಡಿತ್ಯವು ಇಲ್ಲ , ಒಂದಂತು ನಿಜ "ಪ್ರಜೆ ಪ್ರಜ್ಞಾವಂತ ನಾದರ ,ದೇಶವು ಪ್ರಜ್ವಲಿಸುತ್ತದೆ" ಎಂದು.
ಈಗ ವಿಷಯಕ್ಕೆ ಬರೋಣ ,
ಮೊನ್ನೆ ಶುಕ್ರವಾರ ಚಿತ್ರರಸಿಕರಿಗೆ ಡಬಲ್ ಧಮಾಕ , ಅಂದು ಬಹುನಿರೀಕ್ಷಿತ , ಉಪೇಂದ್ರರ ಹೆಸರಿಡದ ಚಿತ್ರದ ಬಿಡುಗಡೆ ಮತ್ತು ಅಂದೇ ಒಂದು ತೆರೆಮರೆಯಲ್ಲಿ , ಕಣ್ಣಂಚಿಗೆ ಹತ್ತಿರವಾದ ಚಿತ್ರ "ಖೆಲೆನ್ ಹುಂ ಜಿ ಜಾನ್ ಸೆ" ಚಿತ್ರದ ಬಿಡುಗಡೆ.
ಇಲ್ಲಿ ನಾನು ಒಂದು ಪದವನ್ನು ಉಪಯೋಗಿಸಿದೆ , ಕಣ್ಣಂಚು , ಈ ಪದಕ್ಕೆ ಅಭೂತಪೂರ್ವ ಅರ್ಥವಿದೆ .
ನೀವು ಒಂದು ವಸ್ತುವನ್ನ ಕಣ್ಣಿನಿಂದ ನೋಡಬಹುದು , ಇದು ಪ್ರತಿ ಜೀವಿಗೂ ಗೊತ್ತಿರುವ ವಿಷಯ ( ಬೇರೆ ಹೇಳೋ ) ,
ಓಕೆ ಸರಿ ಸ್ವಾಮಿ ,
ಹಾಗೆ, ಅದು ಒಂದು ಕೆಲವು ಮೀಟರ್ ಗಳಷ್ಟು , ಕೆಲವು ಸೆಂಟಿ ಮೀಟರ್ ಗಳಷ್ಟು ದೂರವಿದ್ದರೆ ನಾವು ಅದನ್ನ ನೋಡಬಹುದು , ವಸ್ತುವಿನ ಗಾತ್ರವನ್ನ ನಾವು ಗಣನೆಗೆ ತಗೆದುಕೊಂಡೆವು ಎಂಬೋಣ .
ಅದೇ ವಸ್ತುವನ್ನ ನಿಮ್ಮ ಕಣ್ಣ ಅಂಚಿನಲ್ಲಿ ಇಟ್ಟು ಗಮನಿಸಿ , ಅಲ್ಲಿ ನಿಮ್ಮ ದೃಷ್ಟಿಕೋನ ಶೂನ್ಯವಾಗುತ್ತದೆ , ಆಗ ಏನು ಕಾಣಸಿಗುವುದಿಲ್ಲ .
ಅಂದರೆ ನಮ್ಮ ಜೀವನಕ್ಕೆ , ನಮ್ಮ ಭಾವನೆಗಳಿಗೆ ಹತ್ತಿರವಾದ ವಿಷಯಗಳನ್ನ ನಾವು ಬಹುಬೇಗನೆ ಕಂಡುಕೊಳ್ಳಲು ಮತ್ತು ಅದರ ಬೆಲೆ ತಿಳಿಯಲು ಅಷ್ಟು ಬೇಗ ಸಾಧ್ಯವಾಗುವುದಿಲ್ಲ , ಕಾರಣ ಅವು ನಮ್ಮಲ್ಲಿ ಹುದುಗಿಬಿತ್ತಿವೆ .
ಇಲ್ಲಿ ನಾನು ಮಾತನಾಡುತ್ತಿರುವುದು ನಮ್ಮ ದೇಶದ ಸ್ವತಂತ್ರ ಸಂಗ್ರಾಮ ಕಲಿಗಳ ಬಗ್ಗೆ.
correct ಅಲ್ವ ?
1947 ಆಗಸ್ಟ್ 15 ರಂದು midnight ನಮಗೆ ಸ್ವತಂತ್ರ ಬಂದಿದೆ ಎಂದು ತಿಳಿದು , ವರ್ಷಕ್ಕೊಮ್ಮೆ ರಜೆ enjoy ಮಾಡುವ ಕಾಲದಲ್ಲಿ ನಾವು ಇದ್ದೇವೆ ,ಅದು ಪ್ರಸಕ್ತ ಮತ್ತು ದುರದೃಸ್ಟಕರ .
ಆದರೆ ಈ ಆಗಸ್ಟ್ 15 ,ಒಂದು ಸುವರ್ಣ ದಿನವಾಗಲು ಶ್ರಮಿಸಿದವರು ಅನೇಕರು , ಅಂಥಹ ಅನೇಕರಲ್ಲಿ ಒಬ್ಬರ ಕಥೆ ಯನ್ನ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.
ಇದು ಸತ್ಯ ಕಥೆ ಸ್ವಾಮಿ !!!!!!!!!
ಈ ಚಿತ್ರದ ಬಗ್ಗೆ ಹೇಳ್ತಿನಿ , ಈ ಚಿತ್ರವೂ ಒಂದು ಸತ್ಯ ಕಥೆ , ಸತ್ಯ ಕಥೆ ಆಧಾರಿತ ಚಿತ್ರ . ಇದು 1930 ರಿಂದ 1934 ರವರೆಗೆ ಬಂಗಾಳದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಒಂದು ಪುಟ . ಈ ಪುಟ ದ ಅಸ್ತಿತ್ವ ದ ಬಗ್ಗೆ ಬಹು ಮಂದಿಗೆ ತಿಳಿದೇ ಇಲ್ಲ , ಕಾರಣ ತಿಳಿದಿಲ್ಲ .
ಇದನ್ನ ಪುಸ್ತಕ ರೂಪದಲ್ಲಿ ಬರೆದವರು Manini chatterjee , ಪುಸ್ತಕದ ಹೆಸರು DOandDIE: ದಿ chittagong uprising ,
ಹೆಸರೇ ಹೇಳುವಂತೆ ಇದು ಸ್ವಾತಂತ್ರಕ್ಕಾಗಿ ಪ್ರಾಣದಾನ ಮಾಡಿದವರ ಕಥೆ.
ಇಲ್ಲಿ ನಾನು ಕಥೆ ಹೇಳಲು ಇಚ್ಚಿಸುವುದಿಲ್ಲ , ದಯವಿಟ್ಟು ಒಮ್ಮೆ ಚಿತ್ರಮಂದಿರದಲ್ಲಿ ಚಿತ್ರ ನೋಡಿ,
ಸ್ವತಂತ್ರ ಎಂಬುವ ಪದದ ಅರ್ಥ ತಿಳಿವುದು , ತ್ಯಾಗ ಎಂಬ ಪದದ ಅರ್ಥ ತಿಳಿವುದು .
ಎಂದಿನಂತೆ ಅಶುತೋಷ್ ಗೊವಾರಿಕರ್ , ಒಬ್ಬ ಉತ್ತಮ ನಿರ್ದೇಶಕ ಎಂದು ನಿರೂಪಿಸಿದ್ದಾರೆ .
ಚಿತ್ರ ರಸಿಕರು , ದೇಶ ಭಕ್ತರು , ಕಾಂಗ್ರೆಸ್ಸಿಗರು , BJP ಗಳು , communistaru , ಓಟು ಹಾಕದವರು , ಓಟು ಹಾಕುವವರು , ಓಟು ಹಾಕಲು ಅರ್ಹತೆ ಇಲ್ಲದವರು , ನಮ್ಮ ದೇಶ ಭಾರತ ಎಂದು ತಿಳಿದವರು ,ಸಾಮಾನ್ಯ ಮನುಷ್ಯರು ಎಲ್ಲರು ಚಿತ್ರ ನೋಡಿ ,
ಏನಾದರು ಚಿತ್ರದಲ್ಲಿ ಕಲಿಕೆ ವಸ್ತು ವಿದ್ದರೆ ಕಲಿಯಿರಿ .
ಸ್ವಲ್ಪ emotional ಅಗಿಬಿಡ್ತ್ಹಿವಿ ಅಲ್ವ , ದೇಶದ ವಿಷಯಕ್ಕೆ ಬಂದಾಗ !!!!!!!!!!!!!!!!!!!!!!!!!!!!!!
ಸಿಗೋಣ ಮತ್ತೆ , ಇಂತಿ ನಿಮ್ಮ
ಗಂಗ
Subscribe to:
Posts (Atom)