Thursday, December 30, 2010

ಹೃದಯದಿಂದ ................

ತನು ಕರಗಿದಾಗ
ಜೀವದ ವೀಣೆ ಮೀಟಿದಾಗ , ದೇಹದಲ್ಲಿ ಜೀವವೇ ನಿಂತಾಗ ,
ನಿನ್ನ ಚೆಲುವೆ ನನ್ನ ಎಬ್ಬಿಸಿತು , ಪ್ರೇಮವೆಂಬ ಸಾಮ್ರಾಜ್ಯದಿಂದ || ||

ಜೀವ ಜೀವಕೂ , ಭಾವ ಭಾವನೆಗಳಿಗೂ
ಅತೀತವಾದ ನನ್ನ ಪ್ರೀತಿ ನಿನ್ನ
ಮನಕ್ಕೆ ತೃಪ್ತಿ ಕೊಟ್ಟರೆ ನಾ ಧನ್ಯ ,

ಉತ್ಪ್ರೇಕ್ಷೆಗೆ , ರೂಪಕಕ್ಕೆ ನಿನ್ನ ಬರೆಯಲು 
ನನ್ನಲ್ಲಿ ಭಾವನೆಗಳು ಇಲ್ಲದಾಗಿವೆ
ಈ ಪ್ರೇಮಪಾಶದಿಂದ ದಯವಿಟ್ಟು ನನ್ನ ಮುಕ್ತ ಗೊಳಿಸು

ಹೆಸರಿಗೆ, ಉಸಿರಿಗೆ, ಹಸಿರಿಗೆ, ಮನಸಿಗೆ
ಮೆದುಳಿಗೆ , ನನ್ನ ಕರ್ಮಕ್ಕೆ
ನೀನು ನನ್ನ ನೆಲವಾದೆ ,
ಚೆಲುವೆ ನಿನ್ನ ನೋಡಲು ನನ್ನ ಮನ ಹಂಬಲಿಸುತಿದೆ ............


ಹೀಗೆ ಎನ್ನ  ಮನದ ಮತ್ತಷ್ಟು ವ್ಯಥೆ ಗಳು ,

ರೆಪ್ಪೆಯ ಮೇಲಿರುವ ಎನ್ನ ಚೆಲುವೆ ,
ನನ್ನ ಕಣ್ಣಿಗೆ ಕಾಣದಾಹಿಳು
ನನ್ನ ಎಲ್ಲ ಆಲೋಚನೆಗಳಲ್ಲಿ ಹುದುಗಿರುವ  ನನ್ನ ಚೆಲುವೆ
ಮನದಲ್ಲಿ ಅಚ್ಚಾಗಿರುವಾಗ , ಕಣ್ಣ ದೃಷ್ಟಿಯಲ್ಲಿ ಏನಿದೆ ಸೊಗಸು  ||

ಚೆಲುವೆಯ ಅಂದ ನನ್ನ ಮನದಲ್ಲಿ
ಆಸೆ , ಬಯಕೆ ಉಂಟು ಮಾಡಿದೆ
ಆದರೆ  ಚೆಲುವೆಯ ನೆನದಲ್ಲಿ , ನನ್ನ ಮನದಲ್ಲಿ,
ಎನ್ನ ಇರುವಿಕೆಯೇ ಇಲ್ಲದಂತಾಗುತ್ತದೆ ||

ನನ್ನ ಕಣ್ಣಿಗೆ ಬಿದ್ದ ಎಲ್ಲ ಚೆಲುವೆಯರಿಗೆ , ನನ್ನ ಕವನಗಳು ಅರ್ಪಣೆ ......................

Sunday, December 19, 2010

ನಿಜ ಸ್ವಾಮಿ ಇದು ಸತ್ಯ !

ನಮಗೆ ಸ್ವಾತಂತ್ರ  ಬಂದಿದೆ ,ನಾವು ಭಾರತೀಯರು ,ನಾವು ಸ್ವತಂತ್ರರು ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬರಬಹುದು ಎಂಬ ಭಯದಿಂದ ಈ ಲೇಖನವನ್ನು ಬರೆಯಲು ಸಜ್ಜಾಗುತ್ತಿದೇನೆ .

ಪರಕೀಯರಿಂದ ನಮ್ಮ ದೇಶವನ್ನ ನಮ್ಮ ಕೈಗೆ ತೆಗೆದುಕೊಂಡ ಕಾಲದಿಂದ ನಮಗೆ ತೊಂದರೆಗಳು ಒಂದರ ನಂತರ ಒಂದರಂತೆ ಪುಂಖಾನುಪುಂಖವಾಗಿ   ಒಕ್ಕರಿಸುತ್ತಿವೆ. ಇದರ resulte , ನಮ್ಮ ದೇಶ ಈಗಲೂ ಅಭಿವೃದ್ದಿಗೊಳುತಿರುವ   ರಾಷ್ಟ್ರ . ಇನ್ನು 30 ವರ್ಷಗಳ ನಂತರವೂ ನಮ್ಮ ದೇಶ ಅಭಿವೃದ್ದಿಗೊಳುತ್ತಿರುವ ರಾಷ್ಟ್ರವಾಗಿಯೇ ಉಳಿಯುವುದು ಎಂಬುದು ವಿಷಾದದ ಭವಿಷ್ಯ .

 ಏನು ಮಾಡೋದು ಸ್ವಾಮಿ ನಮ್ಮ ದೇಶದಲ್ಲಿ ಸಂಪತ್ತೆ ಇಲ್ಲ . ಇದ್ದ ಸಂಪತ್ತೆಲ್ಲ ಪೂರ್ವ ಸ್ವತಂತ್ರ ಕಾಲದಲ್ಲೇ ನಮ್ಮ ದೇಶದಿಂದ ಕೊಳ್ಳೆ ಹೊಡೆದಿದ್ದಾರೆ ಎಂದು ನೀವು ಕೇಳಬಹುದು , ಇದಕ್ಕೆ ನನ್ನ ಉತ್ತರ iste , ಒಂದು ದೇಶದ ಅತಿ ದೊಡ್ಡ  ಸಂಪತ್ತು ,ಮಾನವ ಸಂಪನ್ಮೂಲ ಸಂಪತ್ತು , ಈ ಸಂಪತ್ತನ್ನ ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದಲ್ಲಿ ,ಅದು ಎಂಥಹ ದೇಶವೇ ಆಗಿರಲಿ ,ಅದು ಒಂದು supernatural power ಆಗಿ ಹೊರ ಹೊಮ್ಮಲಿದೆ ಎಂಬುದು ಸಾರವಕಾಲಿಕ ಸತ್ಯ , ಇದು ನಾನು ಹೇಳ್ತಿರೋದು ಅಲ್ಲ ಸ್ವಾಮಿ.

ಬಿಡಿ , ದೇಶದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿಯು ನಾನಲ್ಲ ಮತ್ತು  ನನ್ನಲ್ಲಿ ಅಂಥಹ ಪಾಂಡಿತ್ಯವು ಇಲ್ಲ , ಒಂದಂತು ನಿಜ "ಪ್ರಜೆ ಪ್ರಜ್ಞಾವಂತ ನಾದರ ,ದೇಶವು ಪ್ರಜ್ವಲಿಸುತ್ತದೆ" ಎಂದು.

ಈಗ ವಿಷಯಕ್ಕೆ ಬರೋಣ ,
ಮೊನ್ನೆ ಶುಕ್ರವಾರ ಚಿತ್ರರಸಿಕರಿಗೆ ಡಬಲ್ ಧಮಾಕ , ಅಂದು  ಬಹುನಿರೀಕ್ಷಿತ , ಉಪೇಂದ್ರರ ಹೆಸರಿಡದ ಚಿತ್ರದ  ಬಿಡುಗಡೆ ಮತ್ತು ಅಂದೇ ಒಂದು ತೆರೆಮರೆಯಲ್ಲಿ , ಕಣ್ಣಂಚಿಗೆ ಹತ್ತಿರವಾದ ಚಿತ್ರ "ಖೆಲೆನ್ ಹುಂ ಜಿ ಜಾನ್ ಸೆ" ಚಿತ್ರದ ಬಿಡುಗಡೆ.
ಇಲ್ಲಿ ನಾನು ಒಂದು ಪದವನ್ನು ಉಪಯೋಗಿಸಿದೆ , ಕಣ್ಣಂಚು , ಈ ಪದಕ್ಕೆ  ಅಭೂತಪೂರ್ವ ಅರ್ಥವಿದೆ .
ನೀವು ಒಂದು ವಸ್ತುವನ್ನ ಕಣ್ಣಿನಿಂದ ನೋಡಬಹುದು , ಇದು ಪ್ರತಿ ಜೀವಿಗೂ ಗೊತ್ತಿರುವ ವಿಷಯ ( ಬೇರೆ ಹೇಳೋ ) ,
ಓಕೆ ಸರಿ ಸ್ವಾಮಿ ,
ಹಾಗೆ, ಅದು ಒಂದು ಕೆಲವು ಮೀಟರ್ ಗಳಷ್ಟು , ಕೆಲವು ಸೆಂಟಿ ಮೀಟರ್ ಗಳಷ್ಟು ದೂರವಿದ್ದರೆ ನಾವು ಅದನ್ನ ನೋಡಬಹುದು , ವಸ್ತುವಿನ ಗಾತ್ರವನ್ನ ನಾವು ಗಣನೆಗೆ ತಗೆದುಕೊಂಡೆವು ಎಂಬೋಣ .
 ಅದೇ ವಸ್ತುವನ್ನ ನಿಮ್ಮ ಕಣ್ಣ ಅಂಚಿನಲ್ಲಿ ಇಟ್ಟು ಗಮನಿಸಿ , ಅಲ್ಲಿ ನಿಮ್ಮ ದೃಷ್ಟಿಕೋನ   ಶೂನ್ಯವಾಗುತ್ತದೆ , ಆಗ ಏನು ಕಾಣಸಿಗುವುದಿಲ್ಲ .
ಅಂದರೆ ನಮ್ಮ ಜೀವನಕ್ಕೆ , ನಮ್ಮ ಭಾವನೆಗಳಿಗೆ ಹತ್ತಿರವಾದ ವಿಷಯಗಳನ್ನ ನಾವು ಬಹುಬೇಗನೆ ಕಂಡುಕೊಳ್ಳಲು  ಮತ್ತು ಅದರ ಬೆಲೆ ತಿಳಿಯಲು ಅಷ್ಟು ಬೇಗ ಸಾಧ್ಯವಾಗುವುದಿಲ್ಲ , ಕಾರಣ ಅವು ನಮ್ಮಲ್ಲಿ ಹುದುಗಿಬಿತ್ತಿವೆ  .
ಇಲ್ಲಿ ನಾನು ಮಾತನಾಡುತ್ತಿರುವುದು ನಮ್ಮ ದೇಶದ ಸ್ವತಂತ್ರ ಸಂಗ್ರಾಮ ಕಲಿಗಳ ಬಗ್ಗೆ.

correct ಅಲ್ವ ?

1947 ಆಗಸ್ಟ್ 15 ರಂದು midnight ನಮಗೆ ಸ್ವತಂತ್ರ ಬಂದಿದೆ ಎಂದು ತಿಳಿದು , ವರ್ಷಕ್ಕೊಮ್ಮೆ ರಜೆ enjoy ಮಾಡುವ ಕಾಲದಲ್ಲಿ ನಾವು ಇದ್ದೇವೆ ,ಅದು ಪ್ರಸಕ್ತ ಮತ್ತು ದುರದೃಸ್ಟಕರ .
ಆದರೆ ಈ  ಆಗಸ್ಟ್ 15 ,ಒಂದು ಸುವರ್ಣ ದಿನವಾಗಲು ಶ್ರಮಿಸಿದವರು ಅನೇಕರು , ಅಂಥಹ ಅನೇಕರಲ್ಲಿ ಒಬ್ಬರ ಕಥೆ ಯನ್ನ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.

ಇದು ಸತ್ಯ ಕಥೆ ಸ್ವಾಮಿ !!!!!!!!!
ಈ ಚಿತ್ರದ ಬಗ್ಗೆ  ಹೇಳ್ತಿನಿ , ಈ ಚಿತ್ರವೂ ಒಂದು ಸತ್ಯ ಕಥೆ , ಸತ್ಯ ಕಥೆ ಆಧಾರಿತ  ಚಿತ್ರ . ಇದು 1930 ರಿಂದ 1934 ರವರೆಗೆ ಬಂಗಾಳದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಒಂದು ಪುಟ . ಈ ಪುಟ ದ ಅಸ್ತಿತ್ವ ದ ಬಗ್ಗೆ ಬಹು ಮಂದಿಗೆ ತಿಳಿದೇ ಇಲ್ಲ , ಕಾರಣ ತಿಳಿದಿಲ್ಲ .
ಇದನ್ನ ಪುಸ್ತಕ ರೂಪದಲ್ಲಿ ಬರೆದವರು Manini chatterjee   , ಪುಸ್ತಕದ ಹೆಸರು  DOandDIE: ದಿ chittagong uprising   ,
ಹೆಸರೇ ಹೇಳುವಂತೆ ಇದು ಸ್ವಾತಂತ್ರಕ್ಕಾಗಿ ಪ್ರಾಣದಾನ ಮಾಡಿದವರ ಕಥೆ.
ಇಲ್ಲಿ ನಾನು ಕಥೆ ಹೇಳಲು ಇಚ್ಚಿಸುವುದಿಲ್ಲ , ದಯವಿಟ್ಟು ಒಮ್ಮೆ ಚಿತ್ರಮಂದಿರದಲ್ಲಿ ಚಿತ್ರ ನೋಡಿ,
ಸ್ವತಂತ್ರ ಎಂಬುವ ಪದದ ಅರ್ಥ ತಿಳಿವುದು , ತ್ಯಾಗ ಎಂಬ ಪದದ ಅರ್ಥ ತಿಳಿವುದು .
ಎಂದಿನಂತೆ ಅಶುತೋಷ್ ಗೊವಾರಿಕರ್ , ಒಬ್ಬ ಉತ್ತಮ ನಿರ್ದೇಶಕ ಎಂದು ನಿರೂಪಿಸಿದ್ದಾರೆ .

ಚಿತ್ರ ರಸಿಕರು , ದೇಶ ಭಕ್ತರು , ಕಾಂಗ್ರೆಸ್ಸಿಗರು  , BJP ಗಳು , communistaru , ಓಟು ಹಾಕದವರು , ಓಟು ಹಾಕುವವರು , ಓಟು ಹಾಕಲು ಅರ್ಹತೆ ಇಲ್ಲದವರು , ನಮ್ಮ ದೇಶ ಭಾರತ ಎಂದು ತಿಳಿದವರು ,ಸಾಮಾನ್ಯ ಮನುಷ್ಯರು ಎಲ್ಲರು ಚಿತ್ರ ನೋಡಿ ,

ಏನಾದರು ಚಿತ್ರದಲ್ಲಿ ಕಲಿಕೆ ವಸ್ತು ವಿದ್ದರೆ ಕಲಿಯಿರಿ .


ಸ್ವಲ್ಪ emotional ಅಗಿಬಿಡ್ತ್ಹಿವಿ  ಅಲ್ವ , ದೇಶದ ವಿಷಯಕ್ಕೆ ಬಂದಾಗ !!!!!!!!!!!!!!!!!!!!!!!!!!!!!!

ಸಿಗೋಣ ಮತ್ತೆ , ಇಂತಿ ನಿಮ್ಮ
ಗಂಗ

Monday, April 26, 2010

ಪೃಥ್ವಿ - ಗಣಿ ದಣಿಗಳ ಮೇಲೆ ಮೊದಲ ದನಿ

As usual ಕೆಲಸ ಮುಗಿಸಿಕೊಂಡು ಶುಕ್ರವಾರ ಮನೆಗೆ ಹೋದೆ ,ಮಳೆಗೆ ಸಿಕ್ಕಿ ನನ್ನ ಭಾಧೆ ಬೇಡ.
ತುಮಕೂರಿನಲ್ಲಿ ಆಲಿ ಕಲ್ಲು ಸಹಿತ ಮಳೆ ಯು ಬಿದ್ದಿತ್ತು, ಹತ್ತಾರು ಮರಗಳು ಭೂತಾಯಿಯ ಮಡಿಲು ಸೇರಿದ್ದವು.

ಈ ಭಾರಿ ಬೆಂಗಳೂರು ನಿಜವಾಗಿಯೂ ಬೆಂದಕಾಳೂರು ಆಗಿತ್ತು ,ಈ ಪ್ರಕೃತಿ ವ್ಯಪರಿತ್ಯ ಗಳಿಂದ ಮಳೆಯೂ ಈ ಬಾರಿ ಹೆಚ್ಚೇ ಎಂದು ಹೇಳ ಲಾಗುತ್ಹಿದೆ.

ಇದೆಲ್ಲ ಇರಲಿ, ಪ್ರಕ್ರತಿ ಅಥವಾ ಭೂಮಿ ನಮ್ಮ ಪಾಡಿಗೆ ಹಾಳಗ್ಥಿದೆಯೇ ಹೊರತು , ಭೂಮಿಯ ಪಾಡಿಗೆ ಅಲ್ಲ ಅಂತ ಪೂ . ಚo . ತೆe , ಹೇಳಿದ ಮಾತು ನೆನಪಿಸಿ ಇದನ್ನು ತುಸು ಮರೆಯೋಣ.

ನನ್ನ ಸ್ನೇಹಿತನೊಂದಿಗೆ ಶನಿವಾರ ಅಂದ್ರೆ ಕ್ರಿ .ಶ ೨೦೧೦ ಏಪ್ರಿಲ್ ೨೪ ,ಪೃಥ್ವಿ ಎಂಬ ಹೊಸ ಕನ್ನಡ ಚಿತ್ರವನ್ನು ತುಮಕೂರಿನ ವರ್ಲ್ಡ್ ಫೇಮಸ್ ಗಾಯತ್ರಿ ಚಿತ್ರಮಂದಿರದಲ್ಲಿ ನೋಡಲು ಹೋದೆವು. ಬಿಸಿಲ ಬೇಗೆ ನಮ್ಮ ದೇಹವನ್ನು ಕಾದುತ್ಹಿತು .

ಹೇಗೋ ಚಿತ್ರಮಂದಿರದಲ್ಲಿ ಕುಳಿತೆವು ,ಚಿತ್ರವೂ ಪ್ರರಂಬವಯಿತು .
ಹೀರೋ ನಮ್ಮ ಪುನೀತ್ ರಾಜ ಕುಮಾರ್ , ಒಳ್ಳೆಯ actor .
ಆದ್ರೆ ಚಿತ್ರದ ನಾಯಕಿ ಪಾರ್ವತಿ ಮೆನನ್ ಮಾತ್ರ , ಸ್ಕ್ರೀನ್ ಕಡೆ ಮತ್ತೊಮ್ಮೆ ನೋಡುವಂತೆ ಮಾಡುತ್ತಾಳೆ .

ನಮ್ಮ ಕರ್ನಾಟಕದ ಗಡಿ ಭಾಗವಾದ , ಕಬ್ಬಿಣದ ಬೀಡು , ಈಗಿನ ರಾಜಕೀಯದ ವರ್ಲ್ಡ್ ಬ್ಯಾಂಕ್ , ಗಣಿ ದಣಿಗಳ ಬೀಡು, ರೈತರ ಬಳಿ ಭೂಮಿ ಕಸಿದು ಕೊಂಡು ಏರ್ ಪೋರ್ಟ್ ಮಾಡಹೊರಟಿರುವ ಜಿಲ್ಲೆ , ಸದಾ ದೂಳುತುಮ್ಬಿದ ಪ್ರದೇಶ ನಮ್ಮ ರಾಜ್ಯದ ಬಳ್ಳಾರಿ .
ಚಿತ್ರದ ನಾಯಕ ಇಲ್ಲಿ ಒಬ್ಬ ಐಎಎಸ್ ಅಧಿಕಾರಿ, ಐಎಎಸ್ ಅವನ ಜೀವನದ ಗುರಿ , ಬಳ್ಳಾರಿ ಗೆ ಅವನ ವರ್ಗಾವಣೆ ಆಗುತ್ತದೆ.
ಆ ಹೊತ್ತಿಗೆ ಎರಡು ಹಾಡು, ಮದುವೆ ಮುಂತಾದವು ಮುಗಿದಿರುತ್ತದೆ .

ಚಿತ್ರದಲ್ಲಿ , ಬಳ್ಳಾರಿ ಯಾ ಮೈನಿಂಗ್ ನಿಂದ ನಡೆಯುತ್ತಿರುವ , ಎಲ್ಲ ಸಮಸ್ಯೆಗಳನ್ನು ತೋರಿಸಲಾಗಿದೆ.
Bhorpade ಸಮಿತಿಯ survey ರಿಪೋರ್ಟ್ ಅನ್ನು , ಗಣಿ ಧಣಿಗಳು ಪಡೆಯಲುನಿರ್ದರಿಸುತ್ತಾರೆ , ಕಾರಣ ಅದರಲ್ಲಿ ಗಡಿಯ ಬಗ್ಗೆ ಹಲವಾರು ಉಪಯುಕ್ತ ಮಾಹಿತಿ ಗಳರುತ್ತವೆ.

ಆದರೆ ಸುರ್ವೆಯೇರ್ ಕಾಂತರಾಜು , ಇವರಿಗೆ ಭಯಪಟ್ಟು ಆಂಧ್ರಕ್ಕೆ ಹೋಗಿರುತ್ತಾನೆ.
ನಮ್ಮ ಐಎಎಸ್ ,ಅಲ್ಲಿ ಒಬ್ಬ ದಕ್ಷ ಆಧಿಕಾರಿಯಗಿತ್ತಾನೆ, ಕಾಂತರಾಜು ಅವನಿಗೆ survey ರಿಪೋರ್ಟ್ ಅನ್ನು ತಲುಪಿಸುತ್ತಾನೆ.
ಇಷ್ಟು ಕಥೆಯ ಎಳೆ.

ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಎಲ್ಲವನ್ನು ಚೆನ್ನಾಗಿ ತೋರಿಸಲಾಗಿದೆ.
ಬಿಜೆಪಿ ಸರಕಾರ ಇರುವಾಗ , ಈ ತರಹದ ಚಿತ್ರ ಮಾಡಲು ಧುಂ ಬೇಕು , ಅದು ನಿರ್ಮಾಪಕ ಅಂಡ್ ನಿರ್ದೇಶಕ ಜಾಕೋಬ್ ಅಲ್ಲಿ ಇದೆ ಎಂದು ಸಾಬಿತು ಮಾಡಿ ದ್ದಾರೆ .

ಸಾಧು ಕೋಕಿಲ ಕಾಮಿಡಿ ಇದೆ, ಒಳ್ಳೆ punching ಡೈಲಾಗ್ ಗಳು ಇವೆ. ಮಧು ಒಳ್ಳೆಯ ಕೆಲಸ ಮಾಡಿ ದ್ದಾರೆ .
ಹಾಡುಗಳು ಕೇಳುವುದು ಕಷ್ಟ.

Totally , good ಮೂವಿ .

ಇಂತಿ ನಿಮ್ಮ ,
ಗಂಗ