ವರುಷ ಕಳೆ ಹರುಷ ತಳೆ
ನವ ನವೀನ ಹೊಸತು ಎಳೆ ।।ಪ ।।
ಇಳೆಗೆ ಇಂದು ಚಂದ ಮಳೆ
ಚಿಗುರು ತಂದ ಭಾವ ಸೆಳೆ
ಸುಗ್ಗಿ ತಂದ ಬಾಳ ಮಳೆ
ಫಲವು ನಮಗೆ ಇಂದು ನಾಳೆ ।।
ಬಯಕೆ ಹೊತ್ತ ಹಳೆಯ ಹಾಸು
ದುಡಿಮೆ ಗೈವ ಶ್ರದ್ದೆ ಸೂಸು
ಪ್ರತಿ ಕ್ಷಣ ಭಯದ ಮಾಸು
ಕರ್ಮ ಪಠಣ ನಿತ್ಯ ಕಾಸು ।।
ಹೊಲಸ ಭಾವ ದೂಡಿ ಇಂದು
ಮಂದಹಾಸ ನಿತ್ಯ ಬಂಧು
ಸರಳತನವೇ ಸತ್ಯ ಎಂದು
ಜ್ಞಾನಸೆಲೆಯೆ ಏಳ್ಗೆ ಬಿಂದು ।।
ವಿಶ್ವ ಮಾನವ ಭಾವ ಬೆಳೆಯಲಿ
ಮುಕ್ತ ಮನ ನಮ್ಮದಾಗಲಿ
ದ್ವೇಷ ಭಾವ ಅಂತ್ಯ ಕಾಣಲಿ
ಹೊಸ ವರುಷ ಹರುಷ ತರಲಿ ।।
--
ಎಲ್ಲರಿಗು ಹೊಸ ವರುಷದ ಹಾರ್ದಿಕ ಶುಭಾಶಯಗಳು
ಗಂಗರಾಜು .ಕು.ಸಿ.
No comments:
Post a Comment