Tuesday, November 1, 2011

ಸಣ್ಣ ವ್ಯಥೆ - 8

ಅಂದು ಕನ್ನಡ ರಾಜ್ಯೋತ್ಸವ , ದಿನ ಪೂರ್ತಿ ಆಡಳಿತ ಪಕ್ಷದವರನ್ನು ಗೋಳು ಹೊಯ್ದುಕೊಂಡ ವಿರೋಧ ಪಕ್ಷದ ಮುಖಂಡರು,ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು , ವಿಧಾನ ಸೌಧದ ಹತ್ತಿರ ಕನ್ನಡ ಪಟಗಳನ್ನು ಇಟ್ಟು ಜೈ ಕಾರ ಮತ್ತು ಆಡಳಿತ ಪಕ್ಷಕ್ಕೆ ಘೆರಾವ್ ಕೂಗಿದರು.ಮುಖಂಡರು ಕನ್ನಡ ಭಾಷೆಗೆ ಇಂದಿನ ಸ್ಥಾನ ಮತ್ತು ಮಾನಗಳ ಕುರಿತು ಎಲ್ಲಾ ವಾರ್ತಾ ಮಾಧ್ಯಮದವರೊಂದಿಗೆ , ವರದಿಗಾರರು ಜಾಗ ಖಾಲಿ ಮಾಡುವವರೆಗೂ ಆಡಳಿತ ಪಕ್ಷದ ವಿರುದ್ಧ ಉಚ್ಚವಾಗಿ ತೆಗಳಿದರು. ಸಂಜೆಯ ಹೊತ್ತಿಗೆ ಒಂದು ನರ ಪಿಳ್ಳೆಯು ವಿಧಾನ ಸೌಧದ ಹತ್ತಿರ ಕಾಣಲಿಲ್ಲ , ಎಲ್ಲರು ತಮ್ಮ ದಿನಚರಿ ಮುಗಿಸಿ ಬಿ.ಎಂ.ಟಿ.ಸಿ. ಬಸ್ಸು ಹತ್ತಿ ಮನೆ ಸೇರಿಕೊಂಡರು.ಇದೇ ಶಾಸಕರು ಸರಿಯಾಗಿ ೫ ತಿಂಗಳ ಸಮಯದಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ , ತಮ್ಮ ಮೊಮ್ಮಗನಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರವೇಶ ಕೊಡಲಿಲ್ಲ ಎಂದು ,ಮಂದಿಯ ಜೊತೆ ವಿಧಾನ ಸೌಧದ ಬಳಿ ಸಂಜೆಯವರೆಗೂ ಪ್ರತಿಭಟಿಸಿದರು. 

- ಗಂಗರಾಜು.ಕು.ಸಿ.

No comments:

Post a Comment