ಆ ಊರಿಗೊಬ್ಬ ಕವಿಯಿದ್ದ, ಆ ಕವಿಗೆ ಅವನ ಹಳೆಯ ನೆನಪುಗಳೇ ಕಾವ್ಯ ವಸ್ತು. ಆ ನೆನಪಿನಂಗಳದಲ್ಲಿ ನಮ್ಮ ಕವಿಯ ಕವಿತೆಗಳು ಮೀಯುತ್ತಿದ್ದವು."ನೆನೆವ ಮನ" ಎಂಬ ಕವನ ಸಂಕಲನವನ್ನು ಆ ಊರಿನ ಹಿರಿಯರು ಸೇರಿಕೊಂಡು ಪ್ರಕಟಿಸಿದರು ಮತ್ತು ಹಲವಾರು ಬಾರಿ ಮರು ಪ್ರಕಾಶನ ಕೂಡ ಕಂಡಿತು.ಆದರೆ ಈಗ ಕವಿಯ ನೆನೆವ ಮನ ಮತ್ತು ದೇಹ ಆ ಊರನ್ನು ಮರೆತು ಪಟ್ಟಣ ಸೇರಿಯಾಗಿದೆ . ಈಗ ಪಟ್ಟಣದ ಸುಖದ ನನಸುಗಳು, ಬದುಕು ಕಟ್ಟಿಕೊಟ್ಟ ನಲಿವಿನ ನೆನಪುಗಳನ್ನು ಮರೆಸಿ ."ನಾನು ಮತ್ತು ನನ್ನ ಸುಖಿ ಜೀವನ" ಎಂಬ ಕವನ ಸಂಕಲನವನ್ನು ಅವನೇ ಹುಟ್ಟುಹಾಕಿದ ಪ್ರಕಾಶನದಿಂದ ಹೊರಬಂದು ವಿಮರ್ಶಕರಿಂದ ದೊಡ್ಡ ಪೆಟ್ಟುಗಳನ್ನು ಗಳಿಸಿದೆ.
ಈಗ ಕವಿಗೆ ನೆನೆವ ಮನ ಕೊಟ್ಟ ಊರು ಗಣಿ ಧೂಳಿನಿಂದ ಮುಚ್ಚಿ ಹೋಗಿದೆ , ಕವಿಯ ತಂದೆ ತಾಯಿ ದಿನ ನಿತ್ಯ ಗಣಿ ಧೂಳಿನಿಂದ ಬಂದ ಕೂಲಿಯಲ್ಲಿ ಜೀವನ ನೂಕುತ್ತಿದ್ದಾರೆ.
ಐಶ್ವರ್ಯ ಯಾರನ್ನು ಬಿಡುವುದಿಲ್ಲ ಅಲ್ಲವೇ ? ಅದು ಕವಿಯಾಗಲಿ ಅಥವಾ ರವಿಯಾಗಲಿ , ಮೋಹಿಸಿದ ಮೇಲೆ ಮಸಣವೇ ಉತ್ತರವೇ ?
- ಗಂಗರಾಜು.ಕು.ಸಿ.
ಈಗ ಕವಿಗೆ ನೆನೆವ ಮನ ಕೊಟ್ಟ ಊರು ಗಣಿ ಧೂಳಿನಿಂದ ಮುಚ್ಚಿ ಹೋಗಿದೆ , ಕವಿಯ ತಂದೆ ತಾಯಿ ದಿನ ನಿತ್ಯ ಗಣಿ ಧೂಳಿನಿಂದ ಬಂದ ಕೂಲಿಯಲ್ಲಿ ಜೀವನ ನೂಕುತ್ತಿದ್ದಾರೆ.
ಐಶ್ವರ್ಯ ಯಾರನ್ನು ಬಿಡುವುದಿಲ್ಲ ಅಲ್ಲವೇ ? ಅದು ಕವಿಯಾಗಲಿ ಅಥವಾ ರವಿಯಾಗಲಿ , ಮೋಹಿಸಿದ ಮೇಲೆ ಮಸಣವೇ ಉತ್ತರವೇ ?
- ಗಂಗರಾಜು.ಕು.ಸಿ.
No comments:
Post a Comment