Wednesday, November 2, 2011

ಸಣ್ಣ ವ್ಯಥೆ - 9

ಪಿ.ಯು.ಸಿ ಯಲ್ಲಿ ಉನ್ನತ ದರ್ಜೆ ಮತ್ತು ಸಿ.ಇ.ಟಿ. ಪರೀಕ್ಷೆ ಯಲ್ಲಿ ಉತ್ತಮ ಶ್ರೇಣಿ ಪಡೆಯಲೇ ಬೇಕೆಂದು ಭರತ ಹಗಲು ರಾತ್ರಿ ಕಷ್ಟ ಪಟ್ಟು ಓದಿದ , ಭರತನ ಇಚ್ಚೆಯಂತೆ ಉತ್ತಮ ಶ್ರೇಣಿಯನ್ನು ಪಡೆದು ರಾಜ್ಯದ ಅತ್ಯುನ್ನತ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿಕೊಂಡ. ಇಂಜಿನಿಯರಿಂಗ್ ನಲ್ಲೂ ಕೂಡ, ಅತಿ ಹೆಚ್ಚು ಸಂಬಳ ಕೊಡುವ ಕಂಪನಿ ಗೆ ಸೇರಬೇಕೆಂದು ಕಷ್ಟ ಪಟ್ಟು ಓದಿದ , ಪ್ರತಿ ಫಲವಾಗಿ ೬ ನೆ ಸೆಮೆಸ್ಟರ್ ನಲ್ಲೆ ಒಂದು ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡ. ಇಂಜಿನಿಯರಿಂಗ್ ಪದವಿಧರನಾದಮೇಲೆ ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ , ಆದರೆ ಕೇವಲ ೬ ತಿಂಗಳುಗಳಲ್ಲಿ ವೃತ್ತಿ ಜೀವನಕ್ಕೆ ಒಗ್ಗಿಕೊಳ್ಳದೆ , ತಾನೆ ಸ್ವತಃ ಕಂಪನಿ ತೆಗೆಯುತ್ತೇನೆ ಎಂದು ಹೊರಬಂದ . ತನ್ನಲ್ಲಿದ್ದ ಹಣ , ಅಪ್ಪನ ಆಸ್ತಿ ಮತ್ತು ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ಉದ್ಯಮಿಯಾಗಲು ಹೊರಟ, ಆ ಕಂಪನಿ ಕೂಡ ಚೆನ್ನಾಗಿಯೇ ನಡೆಯುತ್ತಿತ್ತು ,ಆದರೆ ಸ್ನೇಹಿತರೊಡನೆ ಗುದ್ದಾಟ ಮಾಡಿಕೊಂಡು ಕಂಪನಿಯನ್ನು ಉನ್ನತ ಬೆಲೆಗೆ ಮಾರಿದ. ಈಗ ಕೇವಲ ಬ್ಯಾಂಕ್ ಬ್ಯಾಲನ್ಸ್ ಮಾತ್ರ ಭರತನ ಬಳಿ ಉಳಿದಿತ್ತು. ತಂದೆ ತಾಯಿಯೂ ಕೂಡ ವೃದ್ಧಾಶ್ರಮದ ಪಾಲಾಗಿದ್ದರು. ಕಾಲೇಜಿನಲ್ಲೇ ಇಷ್ಟ ಪಟ್ಟಿದ ಪ್ರೇಯಸಿ ಪ್ರೀತಿಯನ್ನು ಮದುವೆಯೂ ಆದ , ಆದರೆ ಮದ್ವೆಯಾದ ೩ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿ, ನ್ಯಾಯಾಧೀಶರ ಬಳಿ ಉಗಿಸಿಕೊಂಡು , ಮುಂದಿನ ೩ ತಿಂಗಳಲ್ಲಿ ವಿಚ್ಚೇದನ ಕೂಡ ಪಡೆದ. ಇಷ್ಟೆಲ್ಲಾ ಕಾಲ ಘಟ್ಟದಲ್ಲಿ ನಡೆಯುವ ಹೊತ್ತಿಗೆ ಭರತನಿಗೆ ಬರೋಬ್ಬರಿ ೩೮ ವರ್ಷ, ಇನ್ನು ಏನು ಮಾಡುತ್ತಾನೋ ನೋಡಬೇಕು .
ಇರುವುದೆಲ್ಲವ ಬಿಟ್ಟು ಇಲ್ಲದೆಡೆಗೆ ದಾರಿ , ಅಂದ್ರೆ ಇದೇನಾ ?

- ಗಂಗರಾಜು.ಕು.ಸಿ

No comments:

Post a Comment