Thursday, July 19, 2012

ಸುಖಾ ಸುಮ್ಮನೆ

ಪ್ರತಿ ಕ್ಷಣದಲ್ಲೂ ಭೂಮಿಯ ಮೇಲೆ ಅನೇಕ ಜೀವಿಗಳು ಅಳಿಯುತ್ತಿರುತ್ತವೆ ಹಾಗೆಯೇ ನಮ್ಮ ದೇಹದಲ್ಲಿಯೂ ಕೂಡ
ಅನೇಕ ಜೀವಕೋಶಗಳು ಸಾಯುತ್ತಿರುತ್ತವೆ ಮತ್ತು ಹೊಸ ಜೈವಿಕ ಕ್ರಿಯೆಗಳು ನಡೆಯುತ್ತಿರುತ್ತವೆ .ಹೇಗೆ ಜೈವಿಕ ಅಂಶಗಳಿಗೆ ಹುಟ್ಟು -ಸಾವು ಇದೆಯೋ , ಹಾಗೆ ನಮ್ಮ ಮನಸ್ಸಿನಲ್ಲಿ ಹುದುಗೋ ಭಾವನೆಗಳಿಗೂ ಕೂಡ .ನಮ್ಮ ಮನಸ್ಸಿನ ಯೋಚನಾ ಲಹರಿಯ ಆಧಾರದ ಮೇಲೆ  ಅನೇಕ ಭಾವನೆಗಳು ಜೀವ ಪಡೆಯುತ್ತವೆ  ಮತ್ತು ನಮ್ಮ ಲ್ಲಿರುವವಿವೇಕವೆಂಬ ಅಂಶದಿಂದ ಅನೇಕ ಭಾವನೆಗಳು ಭ್ರೂಣವಸ್ಥೆಯಲ್ಲಿಯೇ ಅಸು ನೀಗುತ್ತವೆ.ಈ ವಿವೇಕದ ರಚನೆ ನಮ್ಮ ಬಾಳಿನಲ್ಲಿ ನಡೆದ -ನೋಡಿದ ಘಟನಇಂದಲೋ ಅಥವಾ ನಮ್ಮ ಪೂರ್ವಗ್ರಹದ  ಆಧಾರದ ಮೇಲೆ ರೂಪುಗೊಂಡಿರುತ್ತದೆ.
ಅಂದರೆ ಪ್ರತಿ ಭಾವನೆಯ ಹುಟ್ಟಿಗೆ ಕಾರಣವಿದೆ ಹಾಗೆಯೇ ಅದರ ಸಾವಿಗೂ ಒಂದು ಕಾರಣ ವಿರುತ್ತದೆ .

ನನ್ನ ಕೆಲವು ಜಿಜ್ಞಾಸೆಗಳನ್ನು ಇಲ್ಲಿ ಬರೆಯುತ್ತೇನೆ , ಪ್ರತಿ ಭಾವನೆಯ ಹುಟ್ಟಿಗೆ ಒಂದು ಕಾರಣವಿದ್ದರೆ,ಭ್ರೂಣವಸ್ಥೆಯಲ್ಲಿ ಇರುವ ಮಗುವಿನ ಭಾವನೆಗಳ ಮೂಲ ಏನು  ? ತಾಯಿಯ ವಿವೇಕದಿಂದಲೇ ,ಹಾಗೆಂದು ಯೋಚನೆ ಮಾಡಿದರೆ ನನ್ನಲ್ಲಿ
ಇನ್ನೊಂದು ತರ್ಕ ಉದ್ಭವಿಸುತ್ತದೆ , ಮಗುವಿಗೆ ಹಸಿವಾದಾಗ ತಾಯಿಗೂ ಹಸಿವಾಗುತ್ತದೆ ಎಂದು ಎಲ್ಲೋ ಓದಿದ ನೆನಪು .
ಹಾಗಾದರೆ ವಿವೇಕ ಇಲ್ಲಿ ವರ್ತಿಸುವುದಿಲ್ಲವೇ?

ಕೆಲವೊಮ್ಮೆ , ಭಯ ಎಂಬುದು ಅತಿ ದೊಡ್ಡ ವಿವೇಕವಾಗಿ ವರ್ತಿಸಿ ,ಎಷ್ಟೋ ಭಾವನೆಗಳನ್ನು ಹೊಸಕಿ ಹಾಕುತ್ತದೆ ,
ಏಕೆಂದರೆ ಭಯ ಹುಟ್ಟುವುದು ಮೌಡ್ಯದಿಂದ ಅಲ್ಲವೇ ?

ತರ್ಕಕ್ಕೆ ಕೊನೆ ಇಲ್ಲ?

--
ಗಂಗರಾಜು.ಕು.ಸಿ .





No comments:

Post a Comment