Wednesday, March 7, 2012

ಸಣ್ಣ ವ್ಯಥೆ -16


ಮಲ್ಯ 2011 
-------------
ಹಾರಿ ಬಿಟ್ಟೆ ವಿಮಾನ 
ಏರಬಲ್ಲಿರ ,ನೀವು ಏರಬಲ್ಲಿರಾ ||

ಹಣವೇ ಎಲ್ಲಾ ನನ್ನ ಬಳಿ 
ಸಂಗಡಕ್ಕೆಲ್ಲಾ ಸುಂದರಿಯರು 
ಮುಂಗಡಕ್ಕೆಲ್ಲಾ ಮಂತ್ರಿವರ್ಯರು 
ಸತ್ಯ ನಶೆಯೇ ನಿತ್ಯ ದೆಸೆಯೂ ....







ಮಲ್ಯ 2012 
--------------
ಏರಿ ಬಿಟ್ಟೆ ವಿಮಾನ 
ಹಿಡಿಯಬಲ್ಲಿರ ,ನನ್ನ ಹಿಡಿಯಬಲ್ಲಿರಾ ||

ಹಣವು ಏಕೆ ನನ್ನ ಬಳಿ 
ಸರಿದರೆಲ್ಲ ಸುಂದರಿಯರು 
ಮಾತಿಗಿಲ್ಲ ಮಂತ್ರಿವರ್ಯರು
ಸತ್ಯ ಭಿಕ್ಷೆಯೇ ನಿತ್ಯ ಭೋಜ್ಯವೂ ...







ಕೊನೆಯ ಮಾತು
------------ 
ಮದ್ಯದ ದೊರೆಗೆ ಮದ 
ಕಟ್ಟಿಟ್ಟ ಬುತ್ತಿ ಖಾಲಿ 
ಬಚ್ಚಿಟ್ಟ ಬುಟ್ಟಿಯ ಖಯಾಲಿ 
ಶೋಕಿಗೆ ಮೊರೆ 
ಹಾಗಾಗಿ ಈಗ ಕೇವಲ ಶೋಕದ ದೊರೆ ||


-- ಗಂಗರಾಜು.ಕು.ಸಿ.

No comments:

Post a Comment