Thursday, March 8, 2012

ಸಣ್ಣ ವ್ಯಥೆ -17

is IT? 
----------

ನಾವೆಲ್ಲಾ ಅಂದು ಗಾಂಧೀ ಜಯಂತಿಯ ಅರ್ಧ ದಿನದ ರಜೆಯನ್ನು ಲಗೋರಿ ಆಟದಲ್ಲಿ ಕಳೆಯುತ್ತಿದೆವು. ನಮ್ಮೆಲ್ಲರ ಚಿತ್ತ ಅಲ್ಲಿ ಚೆಲ್ಲ ಪಿಲ್ಲಿಯಾಗಿದ್ದ ಕಲ್ಲುಗಳ ಮೇಲೆ ಮತ್ತು ಚೆಂಡಿನ ಹಿಂಬಾಲಕನ ಮೇಲೆ ನೆಟ್ಟಿತ್ತು.
ತತ್ಕ್ಷಣಕ್ಕೆ ನನ್ನ ಗಮನ ಆಕಾಶಕ್ಕೆ ಸೂರೆ ಇಟ್ಟಿತು. ಉಳಿದವರ ಕಣ್ಣು ಕೂಡ ನನ್ನ ಕಣ್ಣ ಹಾಗೆ ಆಗಸಕೆ ನೋಟ ಬೀರಿದವು.ಸೂರ್ಯನ ಕಿರಣಗಳ ಸೆರಗಿನಲ್ಲಿ , ಮೋಡಗಳ ಹೊದಿಕೆಯಲ್ಲಿ ಒಂದು ವಿಮಾನ ನುಸುಳಿಕೊಂಡು ಹೋಗುತಿತ್ತು. ಸರಕ್ಕನೆ ವೇಗವಾಗಿ ಬಂದ ಚೆಂಡು ನನ್ನ ಬೆನ್ನಿಗೆ ಬಡಿಯಿತು, ಎಲ್ಲರೂ ನನ್ನ ಹೆಸರಿಡಿದು ಕೂಗಿದರು.

"ರೀ, ಮ್ಯಾನೆಜೆರ್ ಕರೀತಾ ಇದಾರೆ ", ಅಂಥ ಶ್ವೇತ ಬೆನ್ನು ತಟ್ಟಿದಳು .ವರ್ತಮಾನಕ್ಕೆ ಬಂದ ಮನಸ್ಸು ಭ್ರಾಂತಿಯ ಚಿತ್ರವನ್ನು ಅವಳ ಮುಂದಿಟ್ಟವು .
ಇವನು ಉದ್ದಾರ ಆಗಲ್ಲ ಎಂದು ಜರಿದು ತನ್ನ ಕಂಪ್ಯೂಟರ್ ಪರದೆಯಡೆಗೆ ಪಲಾಯನಗೈದಳು.

ಎದ್ದವನೇ ಮುಖಕ್ಕೆ ನೀರು ಎರಚಿಕೊಂಡು, ಬೋಳ್ದಲೇಯ 16 ತಲೆಗೂದಳುಗಳನ್ನು ಸರಿಪಡಿಸಿಕೊಂಡು ಮ್ಯಾನೆಜೆರ್ ಕಾಂ ಚೋರ್ ಕಾರ್ತಿಕನ ರೂಮಿನ ಕಡೆಗೆ ನಡೆದೆ.
ಯಾವಾಗಲು ತಡವಾಗಿ ಬರುವ ಕಾರ್ತಿಕ ಅಂದು ಲಂಚ್ ಗಿಂತ ಮುಂಚೆಯ ಬಂದು ಲ್ಯಾಪ್ಟಾಪ್ ಗುಂಡಿಗಳನ್ನು ಒತ್ತುತಿದ್ದ ದೃಶ್ಯ ನೋಡಿ , ಆಶ್ಚರ್ಯ ಮತ್ತು ಸಂತೋಷ ಕೂಡ ಆಯಿತು.
ಬಾಗಿಲು ತೆಗೆದುಕೊಂಡು ಹೊರಬಂದ ವಿಘ್ನೇಶ್ ಮೂರ್ತಿಯ ಮುಖದಲ್ಲಿ ಎಳ್ಳೆಣ್ಣೆಯ ಗುಣಗಳು ಕಾಣತೊಡಗಿ ,
"ಏನಾಯ್ತುರಿ ?", ಅಂಥ ಅಂದೇ ,
ಅದಾಕೆ ಆ ಅಸಾಮಿ , ಬೇಗ ಕಂಪನಿ ಚೇಂಜ್ ಮಾಡಬೇಕ್ರಿ ಅಂಥ , ತನ್ನ ಬಳ್ಳಾರಿ ಶೈಲಿಯ ಬೈಗುಳದಲ್ಲಿ ಕಾಂ ಚೋರ್ ಕಾರ್ತಿಕನ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸಿ
ಕಾಲ್ಕಿತ್ತ .ವಿಘ್ನೇಶ್ನ ಸ್ಥಿತಿ ನೋಡಿ ನನಗೂ ಏನು ತಿಳಿಯಲಿಲ್ಲ . ಇವನ್ದು ಇದ್ದಿದ್ದೆ ಅಂದುಕೊಂಡು ಅವನ ಭಾಷೆಯಲ್ಲೇ ಬ್ಯೆದುಕೊಂಡು ಕಾಂ ಚೋರ್ ಕಾರ್ತಿಕನ ರೂಮಿಗೆ ನುಸುಳಿ , ಹಲ್ಲು ಗಿಂಜಿ 
"ಹಾಯ್ ಕಾರ್ತಿಕ್ ",ಅಂದೇ .

ಆ ಗುಣಿ ಬಿದ್ದ ಕಣ್ಣುಗಳನ್ನು ಅಗಲಿಸಿ , ಬನ್ನಿ ಅಂಥ ಅಲ್ಲಿದ್ದ ಕುರ್ಚಿಯ ಕಡೆ ಕೈ ತೋರಿದ.

"ಏನ್ ಕಾರ್ತಿಕ್ , ಬರೋದಕ್ಕೆ ಹೇಳಿದ್ರಂತೆ "
ಅದಕ್ಕೆ ಅವನ ಹಳೆ ಚಾಳಿಯಾದ ಬಿಸಿನೀರನ್ನು ತುಟಿಗೇರಿಸಿ,
"ಎಸ್, ಒಂದು ಅಪ್ಡೇಟ್ ಇದೇ".
"ಎಸ್ ಹೇಳಿ "
"ನಿಮ್ಮ ಆನ್ ಸೈಟ್ ಟ್ರಿಪ್ ಕ್ಯಾನ್ಸಲ್ ಆಗಿದೆ , ಯು.ಎಸ್ ಅಲ್ಲಿ ವೀಸಾ ಪ್ರಾಬ್ಲಮ್ ಆಗಿದೆ "
ದಿಗ್ಬ್ರಾಂತನಾದ ನನಗೆ ವಿಜ್ಞೆಶನು ನನ್ನ ಬಳಿ ಆಡಿದ ,ಅಷ್ಟು ಬೈಗುಳಗಳ ಜೊತೆಗೆ ನನ್ನ ಒಂದಷ್ಟು ಬೈಗುಳಗಳು ಮನಸ್ಸಿನಲ್ಲೇ ಕಾಂ ಚೋರ್ ಕಾರ್ತಿಕನ ರೂಪಕ್ಕೆ ಉಗುಳು ಎರಚಿದವು.
"ಒಹ್ ಇಸ್ ಇಟ್ , ಆದ್ರೆ ನಾನು ಬಹಳ ಚೆನ್ನಾಗಿ ಕೆಲಸ ಮಾಡಿದ್ದೇನೆ , ಮತ್ತೆ ನನ್ನ ಕೆಲಸ ಈಗ ಕಸ್ಟಮರ್ ಗೆ ಬೇಕಾಗಿದೆ , ಈಗ ವೀಸಾ ಇಲ್ಲ ಅಂದ್ರೆ ತುಂಬಾ ಪ್ರಾಬ್ಲಮ್ ಆಗುತ್ತೆ "
ಅವನು , ಏನೋ , ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡವನ ಹಾಗೆ ,
"i understand , these things are not in our hands. But your work will be deeply apperciated by company. keep up the good work" , ಎಂದು ಸೋಪು ಹಾಕತೊಡಗಿದ.
ದುಃಖದ ಊರಿಗೆ ಹತ್ತಿರವಾಗಿದ್ದ ನನ್ನ ಕಣ್ಣುಗಳ ಸೆಲೆ , ನನ್ನ ಹಳೆ ಆಸೆಗಳು ಬೂದಿಯಾಗಿರುವ ಸಮುದ್ರಕ್ಕೆ ನುಗ್ಗಿದವು .
ನಾನು "ಇಟ್ಸ್ ಓಕೆ " ಎಂದು , ಅಲ್ಲಿಂದ ಎದ್ದೆ .
ಅರ್ಧ ದಿನ ರಜೆ ತೆಗೆದುಕೊಂಡು , ಮನೆಗೆ ಬಂದು ಮಲಗಿದೆ .

ಮನಸ್ಸು ಕನಸ್ಸಿನ ಮನೆಗೆ ಓಡಿತು .
ಅದೇ ಲಗೋರಿ ಆಟದ ಕನಸ್ಸು ,ಮ್ಯಾಟನಿ ರೂಪದಲ್ಲಿ ಕಂಡಿತು.
ಆದ್ರೆ , ಈಗ ನನ್ನ ಬೆನ್ನಿಗೆ ಬಡಿದ ಚೆಂಡಿನ ಮುಖದಲ್ಲಿ ಕಾಂ ಚೋರ್ ಕಾರ್ತಿಕನ ರೂಪ ನಗುತ್ತಿತ್ತು.

-- ಗಂಗರಾಜು.ಕು.ಸಿ.

No comments:

Post a Comment