Friday, December 9, 2011

ಸಣ್ಣ ವ್ಯಥೆ -13

ಅಂದು ಸೂರ್ಯೋದಯ ಕೊಂಚ ತಡವಾಗಿಯೇ ಆದ ಹಾಗೆ ತಿಮ್ಮನಿಗೆ ಅನ್ನಿಸಿತು,ಎದ್ದವನೇ ಗೋ ಶಾಲೆಗೆ ಹೋಗಿ ಬಸಪ್ಪನ ಕಾಲಿಗೆ ಬಿದ್ದು ,ಅಮ್ಮಿ ಮಾಡಿದ್ದ ಇಟ್ಟು ತಿಂದು ಮಡಿಕೆ ಕಟ್ಟಿದ.ಎಂದೂ ಟೈಮ್ ಗೆ ಬಾರದ ಉದಯ ರಂಗ ಬಸ್ಸು ಪೂಮು ಪೂಮು ಎಂದು ಸದ್ದು ಮಾಡುತ್ತಾ ಧೂಳು ಎಬ್ಬಿಸಿಕೊಂಡು ಪಟೇಲರ ಮನೆ ಮುಂದಿನ ಖಾಲಿ ಜಾಗದಲ್ಲಿ ನಿಂತಿತು.ತಿಮ್ಮ ಚುರಾಕಾಗಿ ಮೊದಲ ಸಾಲನ್ನು ಚಕ್ಕನೆ ಉತ್ತು ಬಿಟ್ಟು , ಎರಡನೇ ಸಾಲಿಗೆ ಅಣಿಯಾಗುತ್ತಿದ್ದ.ಬಸ್ಸಿನಿಂದ ಇಳಿದ ಟಪಾಲಪ್ಪ , ನೇರವಾಗಿ ಪಟೇಲಪ್ಪನ ಮನೆಗೆ ನುಗ್ಗಿದ . ತಿಮ್ಮನ ಮಕ್ಕಳು ಅಮ್ಮಿ ಮಾಡಿದ ಅದೇ ಇಟ್ಟನ್ನು ನುಂಗಿ, ಹರಿದ ನಿಕ್ಕರಿಗೆ ಪಿನ್ ಹಾಕಿಕೊಂಡು, ಕೆರೆ ಪಕ್ಕದ ಈರಪ್ಪನ ಗುಡಿಗೆ ಸ್ಲೇಟ್ ಹಿಡಿದು ಕೊಂಡು ಹೋದರು .ಟಪಾಲಪ್ಪ ಕೊಟ್ಟ ಉತ್ತರವನ್ನ ಓದಿದ ಪಟೇಲಪ್ಪ, ಹುಂಜನಿಗೆ ಊರಿನ ಎಲ್ಲರಿಗು ತಕ್ಷಣ ಬುಲಾವ್ ಕೊಡಲು ಹೇಳಿದ. ತಿಮ್ಮ ಅಷ್ಟು ನೆಲವನ್ನು ಹಸನು ಮಾಡಿ , ಬದಿಗಳಲ್ಲಿ ಬೆಳೆದ ಕಾಂಗ್ರೆಸ್  ಗಿಡಗಳನ್ನು ಕೀಳ ತೊಡಗಿದ್ದ . 
ಊರಿನ ಹಿರಿಯರೆಲ್ಲ ಪಟೇಲಪ್ಪನ ಮನೆ ಮುಂದೆ ಸಭೆ ಸೇರಿದರು. 
"ಇನ್ನು ಮ್ಯಾಲೆ ನಮ್ಗೆ ಸರ್ಕಾರ ಬೀಜ , ಗೊಬ್ಬರ ರಿಯಾಯಿತಿ ಧರದಲ್ಲಿ ಕೊಡಾಕಿಲ್ಲ" ಅಂಥ ಮಾತು ಮುಗಿಸಿದರು.
ತಿಮ್ಮ ಎಷ್ಟು ಕಿತ್ತರು ಕಾಂಗ್ರೆಸ್ ಗಿಡಗಳು ಮಾತ್ರ ನೆಲಸಮವಾಗಲಿಲ್ಲ.

--
ಗಂಗರಾಜು .ಕು.ಸಿ.

No comments:

Post a Comment