Wednesday, June 27, 2012

ಸಣ್ಣ ವ್ಯಥೆ -19

ಹೇಗೋ ಕಷ್ಟ ಪಟ್ಟು ಡಿಗ್ರಿ ಮುಗಿಸಿದ ಆಲೋಕನಿಗೆ ಒಂದು ಕೆಲಸ ಗಿಟ್ಟಿಸಿಕೊಳ್ಳುವಷ್ಟು ಸಾಮರ್ಥ್ಯ ದೊರೆತಿತ್ತು .ಹಾಗೆಯೇ ಮೈಸೂರಿನಲ್ಲಿ ಗಿಟ್ಟಿಸಿಕೊಂಡ.ಆದರೆ ಅವನು ಎಂದು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡವನಲ್ಲ ಹಾಗೆಂದು ಬೇರೆಯವರ ಮಾತುಗಳನ್ನು ಕೇಳುವವನು ಅಲ್ಲ. ಸುಮ್ಮನೆ ಕಿರಿ ಕಿರಿ ಮಾಡಿಕೊಂಡು
ಮನದಲ್ಲೇ ಕಲಸಿ ಹೋಗುವುದು ಅವನ ದುರಾಭ್ಯಾಸ . ಹಾಗಾಗಿ ಉದ್ಯೋಗದ ವಿಷಯದಲ್ಲೂ ,ಹಾರಿ ಹಾರಿ ಸುಸ್ತಾಗಿ ಮರದ ಕೊಂಬೆ ಹುಡುಕುವ ಕಾಗೆಯಂತೆ ಅವನ ಮನಸ್ಸು ಅತಂತ್ರ ಸ್ಥಿತಿಯಲ್ಲಿತ್ತು.
ಅಲೋಕನ ಮನೆಯಲ್ಲಿ ಕಸ ಗುಡಿಸುವವನ ಮಗನಿಂದು ಹಿಡಿದು ,ಊರಿನ ಪಟೇಳಪ್ಪನ ಎರಡನೇ ಹೆಂಡತಿಯ ತಮ್ಮನ ಸಲಹೆಯೂ ಪಡೆದಿದ್ದ.ಅಂತು ಏನೋ ನಿರ್ಧರಿಸಿ ಮೈಸೂರಿಗೆ ಹೋದ , ಆದರೆ ರಿಪೋರ್ಟ್ ಆಗಬೇಕಾದ ವೇಳೆಗೆ ಸರಿಯಾಗಿ ಒಂದು ತಿಂಗಳ ನಂತರ ಹೋಗಿ ,ಮೈಸೂರಿನ ಮೃಗಾಲಯದಲ್ಲಿ ಹೊಸದಾಗಿ ಕಾಂಬೋಡಿಯ ದೇಶದಿಂದ ತರಿಸಿದ್ದ ಮಂಗನನ್ನು ನೋಡಿ ಬಸ್ಸು ಹತ್ತಿದ.

--
ಗಂಗರಾಜು .ಕು.ಸಿ.

No comments:

Post a Comment